ಮದನಿ ನಗರ: ಅಲ್ ಫರ್ಹಾ ಮೀಲಾದ್ ಜಲ್ಸಾ

Update: 2019-11-27 07:43 GMT

ಮಂಗಳೂರು, ನ.27: ಕುತ್ತಾರ್ ಸಮೀಪದ ಮದನಿ ನಗರದ ಅಲ್ ಮದ್ರಸತುಲ್ ಸೆಯ್ಯದ್ ಮದನಿಯ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ) ಜನ್ಮ ದಿನಾಚರಣೆಯ ಪ್ರಯುಕ್ತ 4 ದಿನಗಳ ಅಲ್ ಫರ್ಹಾ ಮೀಲಾದ್ ಜಲ್ಸಾ ಕಾರ್ಯಕ್ರಮವು ಇತ್ತೀಚೆಗೆ ಖಾಝಿ ಅಸ್ಸೈಯದ್ ಕೂರ ತಂಙಳ್‌ರ ನೇತೃತ್ವದಲ್ಲಿ ನಡೆಯಿತು.

ಅಸಾಸ್ ಎಜುಕೇಶನಲ್ ಸೆಂಟರ್‌ನ ಮುದರ್ರಿಸ್ ಅಸ್ಸೈಯದ್ ನಿಝಾಮುದೀನ್ ಬಾಪಕಿ ತಂಙಳ್ ದುಆಗೈದರು. ಐಎಂಯು ಇಸ್ಮಾಯೀಲ್ ಮದನಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಜಾಮಿಯ್ಯ ಸಅದಿಯ್ಯಾ ಅರಬಿಯ್ಯಾದ ಪ್ರಾಂಶುಪಾಲ ಕೆ.ಪಿ. ಹುಸೈನ್ ಸಅದಿ ಕೆಸಿರೋಡ್ ಮುಖ್ಯ ಪ್ರಭಾಷಣ ಮಾಡಿದರು.

ಈ ಸಂದರ್ಭ ಅಲ್ ಫರ್ಹಾ ಸ್ವಾಗತ ಸಮಿತಿಯ ಕನ್ವೀನರ್ ಅಯ್ಯೂಬ್ ಮಹ್ಲೆರಿ, ಅಲ್ ಮದ್ರಸತು ಸೈಯದ್ ಮದನಿ ಅಧ್ಯಕ್ಷ ಇಸ್ಮಾಯೀಲ್ ಅಗೇಲಾ, ಅಲ್ ಫರ್ಹಾ ಸಮಿತಿಯ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲುದ್ದೀನ್ ತಂಙಳ್, ಶಿಹಾಬುದ್ದೀನ್ ಸಖಾಫಿ ಅಳೇಕಲ, ಇಸ್ಮಾಯೀಲ್ ಮದನಿ ನಗರ, ಅಬ್ದುಲ್ ಅಝೀಝ್ ಮದನಿ ನಗರ, ಹೈದರ್ ಪರ್ತಿಪ್ಪಾಡಿ, ಪುತ್ತು ಬಾವ ಮದನಿ ನಗರ, ಎಸ್‌ವೈಎಸ್ ಮದನಿ ನಗರ ಕಾರ್ಯದರ್ಶಿ ಅಬ್ದುಲ್ ಅಝೀಝ್, ಅಹ್ಮದ್ ಇಜಾಝ್ ಮದನಿನಗರ, ಶಾಖಾ ಅಧ್ಯಕ್ಷ ಸಮೀರ್ ಹಾಗೂ ಕಾರ್ಯದರ್ಶಿ ಮುಹಮ್ಮದ್ ಅರ್ಫಾಝ್ ಮತ್ತಿತ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News