ವಾರಸುದಾರರಿಗೆ ಸೂಚನೆ

Update: 2019-11-29 16:01 GMT

ಉಡುಪಿ, ನ.29: ಅಂಬಾಗಿಲು ಜಂಕ್ಷನ್ ಬಳಿ ನ.19ರಂದು ರಾತ್ರಿ ಅಸ್ವಸ್ಥರಾಗಿ ಬಿದ್ದಿದ್ದ ಸುಮಾರು 35 ವರ್ಷ ಪ್ರಾಯದ ಅಪರಿಚಿತ ಯುವಕ ನನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಈ ಅಪರಿಚಿತ ಯುವಕನ ಮೃತ ಶರೀರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇದ್ದು, ವಾರಸುದಾರರೂ ಯಾರಾದರೂ ಇದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ (ದೂ.ಸಂಖ್ಯೆ: 0820-2520444), ಪೊಲೀಸ್ ವೃತ್ತ ನಿರೀಕ್ಷಕರು (ದೂ.ಸಂಖ್ಯೆ: 0820-2520329), ಉಡುಪಿ ಜಿಲ್ಲಾ ನಿಸ್ಸಂತು ಕಚೇರಿ (ದೂ.ಸಂಖ್ಯೆ: 0820-2526444)ಯನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News