'ಸಮುದಾಯದ ಒಗ್ಗೂಡುವಿಕೆಯಿಂದ ನಿಯಂತ್ರಣ ಸಾಧ್ಯ'

Update: 2019-11-30 17:02 GMT

ಉಡುಪಿ, ನ.30: ವಿಶ್ವ ಏಡ್ಸ್ ದಿನ-2019 ಇದರ ಅಂಗವಾಗಿ ಮಣಿಪಾಲ್ ಸ್ಯಾಂಡ್‌ಹಾರ್ಟ್‌ನ ಕಲಾವಿದರಾದ ಶ್ರೀನಾಥ್ ಮಣಿಪಾಲ್, ವೆಂಕಿ ಪಲಿಮಾರು ಮತ್ತು ರವಿ ಹಿರೆಬೆಟ್ಟು ಇವರು ಮಣಿಪಾಲದಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಮರಳುಶಿಲ್ಪ ರಚಿಸಿದ್ದಾರೆ.

ಸಮುದಾಯದ ಒಗ್ಗೂಡುವಿಕೆಯಿಂದ ಈ ಮಾರಕ ಕಾಯಿಲೆಯನ್ನು ನಿಯಂತ್ರಿಸಬಹುದು ಎನ್ನುವ ಈ ವರ್ಷದ ಘೋಷವಾಕ್ಯವನ್ನು ಈ ಕಲಾಕೃತಿಯ ಜೊತೆ ಬಿಂಬಿಸಲಾಗಿದೆ.

ಈ ಕಲಾಕೃತಿಯು ಡಿಸೆಂಬರ್ 2ರವರೆಗೆ ಪ್ರದರ್ಶನದಲ್ಲಿರುತ್ತದೆ ಎಂದು ಕಲಾವಿದರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News