ಮಂಗಳೂರು: ಕ್ರೆಡೈಯಿಂದ ವೃಕ್ಷಾಂದೋಲನಕ್ಕೆ ಚಾಲನೆ

Update: 2019-12-05 06:50 GMT

ಮಂಗಳೂರು, ಡಿ.5: ಕ್ರೆಡೈ ಮಂಗಳೂರು ಸಂಸ್ಥೆಯ ನೇತೃತ್ವದಲ್ಲಿ ಟೀಂ ವೃಕ್ಷ ಹಾಗೂ ಉರ್ವದ ಕೆನರಾ ಶಾಲೆಯ ಸಹಯೋಗದಲ್ಲಿ ವೃಕ್ಷಾಂದೋಲನಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಆಂದೋಲನದ ಅಂಗವಾಗಿ ಕೆನರಾ ಶಾಲೆಯ ಸುತ್ತಮುತ್ತ ಗಿಡಗಳನ್ನು ನೆಡಲಾಯಿತು. ಮಣ್ಣಗುಡ್ಡದ ಕಾರ್ಪೊರೇಟರ್ ಸಂಧ್ಯಾ ಮೊದಲ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕ್ರೆಡೈ ಸಂಸ್ಥೆಯ ಅಧ್ಯಕ್ಷ ನವೀನ್ ಕಾರ್ಡೋಜ ಮಾತನಾಡಿ, ಮುಂಬರುವ ದಿನಗಳಲ್ಲಿ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನಷ್ಟು ಗಿಡಗಳನ್ನು ನೆಡಲಾಗುವುದು ಎಂದರು.

ಪ್ರಮುಖರಾದ ಫತೇ ಮುಹಮ್ಮದ್, ಮೆರಾಜ್ ಯೂಸುಫ್, ಗುರು ಮತ್ತು ಕ್ರೆಡೈ ಯುವ ವಿಭಾಗದ ಸದಸ್ಯರು, ಟೀ ವೃಕ್ಷದ ಸ್ಥಾಪಕ ವಿವೇಕ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News