ಉಡುಪಿ ಆಶಾನಿಲಯದಲ್ಲಿ ಕುಮಾರಸ್ವಾಮಿ ಜನ್ಮಾದಿನಾಚರಣೆ
Update: 2019-12-16 15:56 GMT
ಉಡುಪಿ, ಡಿ.16: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 60ನೆ ಜನ್ಮದಿನದ ಪ್ರಯುಕ್ತ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ವಿ.ಯೋಗೀಶ್ ಶೆಟ್ಟಿ ನೇತೃತ್ವದಲ್ಲಿ ಇಂದು ಉಡುಪಿಯ ವಿಶೇಷ ಮಕ್ಕಳ ಶಾಲೆ ಆಶಾ ನಿಲಯದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ವಾಸುದೇವ್ ರಾವ್, ಜಯಕುಮಾರ್ ಪರ್ಕಳ, ಗಂಗಾಧರ್ ಬಿರ್ತಿ, ಬಿ.ಟಿ.ಮಂಜುನಾಥ್, ಇಕ್ಬಾಲ್ ಅತ್ರಾಡಿ, ಜಯರಾಮ ಆಚಾರ್ಯ, ಪ್ರದೀಪ್ ಜಿ., ಪ್ರಕಾಶ್ ಶೆಟ್ಟಿ, ರವಿರಾಜ್ ಸಾಲ್ಯಾನ್, ಹರಿಣಿ, ಅಬ್ದುಲ್ ರಝಾಕ್, ರಮೇಶ್ ಕುಂದಾಪುರ, ಶಂಶುದ್ದೀನ್ ಮಜೂರು, ರಂಗಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿ ದ್ದರು. ಬಳಿಕ ಮಧ್ಯಾಹ್ನದ ಭೋಜನವನ್ನು ಮಕ್ಕಳಿಗೆ ನೀಡಲಾಯಿತು.