ಡಿ. 20 : ಶಾಂತಿಯತ ಉಳ್ಳಾಲ ಬಂದ್ ಗೆ ಕರೆ
Update: 2019-12-19 18:00 GMT
ಉಳ್ಳಾಲ : ಮಂಗಳೂರಿನಲ್ಲಿ ಗುರುವಾರ ಪೊಲೀಸರು ಗೋಲಿಬಾರ್ ಮತ್ತು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಮತ್ತು ಘಟನೆಯನ್ನು ವಿರೋಧಿಸಿ ಉಳ್ಳಾಲ ನಗರ ಸಭೆ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿ - ಮುಗ್ಗಟ್ಟು ಬಂದ್ ಮಾಡ ಬೇಕೆಂದು ಒತ್ತಾಯಿಸಿ ವಿವಿಧ ಮುಸ್ಲಿಂ ಮುಖಂಡರುಗಳ ಸಭೆಯಲ್ಲಿ ಕರೆ ನೀಡಿದೆ.
ಗೋಲಿಬಾರಿಗೆ ಬಲಿಯಾದ ಇಬ್ಬರು ಯುವಕರ ಕುಟುಂಬಸ್ತರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಗೋಲಿಬಾರಿಗೆ ಕಾರಣಕರ್ತರಾದ ಕಮೀಷನರ್ ಹರ್ಷ ಮತ್ತು ಗೋಲಿಬಾರ್ ನಡೆಸಿದ ಪೋಲೀಸರ ವಿರುದ್ಧ ಕೊಲೆ ಕೇಸು ದಾಖಲಿಸಬೇಕು ಎಂದು ಉಳ್ಳಾಲ ಮುಸ್ಲಿಂ ಒಕ್ಕೂಟ ತಿಳಿಸಿದೆ.