ತೋಡಿಗೆ ಬಿದ್ದು ಮೃತ್ಯು
Update: 2019-12-20 16:51 GMT
ಹೆಬ್ರಿ, ಡಿ. 20: ಕೃಷಿಕರೊಬ್ಬರು ಅಕಸ್ಮಿಕವಾಗಿ ಕೆಸರಿನ ತೋಡಿಗೆ ಮಗುಚಿ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಾಲ್ಕೂರು ಗ್ರಾಮದ ಮಿಯ್ಯಾರು ಅಂಕ್ರಾಲು ಎಂಬಲ್ಲಿ ನಡೆದಿದೆ.
ಮೃತರನ್ನು ಅಂಕ್ರಾಲು ನಿವಾಸಿ ರಾಮ ನಾಯ್ಕ್(68) ಎಂದು ಗುರುತಿಸ ಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಇವರು ಮನೆ ಸಮೀಪದ ಕೇರಳ ಮೂಲದ ಜಾನ್ ಎಂಬವರ ತೋಟದಲ್ಲಿ ತನ್ನ ಜಾನುವಾರುಗಳನ್ನು ಕಟ್ಟಿ ವಾಪಾಸು ಮನೆಗೆ ಬರುತ್ತಿರುವಾಗ, ತೋಟದಲ್ಲಿರುವ ನೀರು ಇರುವ ಕೆಸರಿನ ತೋಡಿಗೆ ಅಕಸ್ಮಿಕವಾಗಿ ಮಗುಚಿ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.