ಯಕ್ಷಗಾನ ಕಲಾವಿದ ಶ್ರೀಧರ ಹೆಬ್ಬಾರ ಮೂಡ್ಕೆರೆ ನಿಧನ

Update: 2019-12-25 13:57 GMT

ಭಟ್ಕಳ: ಯಕ್ಷಗಾನ ಕಲಾವಿದ, ಅರ್ಥದಾರಿ ಮಾರುಕೇರಿಯ ಹೆಜ್ಜಲು ಮೂಡ್ಕೆರೆಯ  ಶ್ರೀಧರ ರಾಮಕೃಷ್ಣ ಹೆಬ್ಬಾರ್ (65) ಅವರು ಮಂಗಳವಾರ ರಾತ್ರಿ  ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು 40 ವರ್ಷಗಳ ಹಿಂದೆ ಮಾರುಕೇರಿಯ ಮೂಡ್ಕೆರೆಯಲ್ಲಿ  ಶಿವಶಾಂತಿಕಾಪರಮೇಶ್ವರಿ ಯಕ್ಷಗಾನ ಮೇಳ ಕಟ್ಟುವಲ್ಲಿ ಇತರ ಕಲಾವಿದರೊಂದಿಗೆ ಪ್ರಮುಖಪಾತ್ರವಹಿಸಿದ್ದಲ್ಲದೇ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಇದೇ ಮೇಳದಿಂದ ನಡೆಸಿದ ಯಕ್ಷಗಾನ ಪ್ರದರ್ಶನದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುವುದರ ಮೂಲಕ ಖ್ಯಾತಿಗಳಿಸಿದ್ದರು. ತಾಳಮದ್ದಲೆಯಲ್ಲಿ ಉತ್ತಮವಾಗಿ ಅರ್ಥ ಹೇಳಿ ಜನರ ಮನರಂಜಿಸುತ್ತಿದ್ದ ಅವರು ಮೃದಂಗ ಮತ್ತು ಭಾಗವತಿಕೆಯ ಕಲೆಯನ್ನೂ ರೂಢಿಸಿಕೊಂಡು ಗಮನ ಸೆಳೆದಿದ್ದರು. ನ.1ರಂದು ನಡೆದ ತಾಲ್ಲೂಕು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರನ್ನು  ಸನ್ಮಾನಿಸಿ ಗೌರವಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News