ಜ. 2: ಸುಳ್ಯದಲ್ಲಿ ಮುಸ್ಲಿಂ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Update: 2019-12-27 09:39 GMT

ಸುಳ್ಯ: ಕೇಂದ್ರ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಎನ್‍ಆರ್ ಸಿ ಮತ್ತು ಸಿಎಎ ವಿರೋಧಿಸಿ ಜ. 2ರಂದು ಸುಳ್ಯದ ಗಾಂಧೀನಗರ ಪೆಟ್ರೋಲ್ ಬಂಕ್‍ನ ಮುಂಭಾಗದಲ್ಲಿ ಸುಳ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆ ಹಾಗೂ ರಾಜಕೀಯ ಪಕ್ಷಗಳ ಸಹಕಾರದಲ್ಲಿ ಪ್ರತಿಭಟನೆ ನಡೆಯಲಿದೆ.

ಈ ಬಗ್ಗೆ ಪೂರ್ವಭಾವಿ ಸಭೆಯು ಸುಳ್ಯದಲ್ಲಿ ನಡೆದಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸುಳ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಇಸಾಕ್ ಹಾಜಿ ಪಾಜಪಳ್ಳ, ಸಂಚಾಲಕ ಇಕ್ಬಾಲ್ ಎಲಿಮಲೆ, ಪದಾಧಿಕಾರಿಗಳಾದ ಹಾಜಿ ಮುಸ್ತಫಾ ಜನತಾ, ಮಹಮ್ಮದ್ ಕುಂಞಿ ಗೂನಡ್ಕ, ರಶೀದ್ ಜಟ್ಟಿಪ್ಪಳ್ಳ, ಆರ್. ಕೆ. ಮಹಮ್ಮದ್, ಕೆ.ಎಸ್. ಉಮ್ಮರ್, ಅಬ್ದುಲ್ ಸಲಾಂ, ತಾಜ್ ಮಹಮ್ಮದ್, ಹಾಜಿ ಇಬ್ರಾಹಿಂ ಇಕ್ಬಾಲ್ ಬಾಳಿಲ, ಇಕ್ಬಾಲ್ ಬೆಳ್ಳಾರೆ, ಜಿ.ಕೆ. ಹಮೀದ್, ಅಬ್ದುಲ್ ಕಲೀಂ, ಹಮೀದ್ ಬೀಜದಕಟ್ಟೆ, ಮಜೀದ್ ನಡುವಡ್ಕ, ಹಸೈನಾರ್ ಜಯನಗರ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News