ಕಾರ್ಕಳ: ಕಂದಾಯ, ಪೌತಿ, ಪಿಂಚಣಿ ಅದಾಲತ್

Update: 2020-02-10 16:03 GMT

ಉಡುಪಿ, ಫೆ.10: ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಗ್ರಾಮಗಳಿಗೆ ಸಂಬಂಧಿಸಿದಂತೆ ಕಂದಾಯ, ಪೌತಿ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮ ಫೆ.12ರಂದು ಬೆಳಗ್ಗೆ 10 ಗಂಟೆಗೆ ಕಾರ್ಕಳ ಶ್ರೀ ಮಂಜುನಾಥ ಪೈ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಉಪಸ್ಥಿತಿಯಲ್ಲಿ ನಡೆಯಲಿದೆ. ಕುಂದಾಪುರದ ಸಹಾಯಕ ಕಮೀಷನರ್ ಕೆ.ರಾಜು ಅದಾಲತ್‌ನ್ನು ನಡೆಸಿ ಕೊಡಲಿರುವರು.

ಕಂದಾಯ, ಪೌತಿ ಮತ್ತು ಪಿಂಚಣಿ ಅದಾಲತ್‌ಗಳಲ್ಲಿ ಪಹಣಿ ಲೋಪದೋಷಗಳನ್ನು ಸರಿಪಡಿಸಲು, ಮೃತ ಖಾತೆದಾರರ ವಾರೀಸು ಹಕ್ಕು ಬದಲಾವಣೆ ಮಾಡಲು ಹಾಗೂ ತಿರಸ್ಕೃತಗೊಂಡಿರುವ ಪಿಂಚಣಿ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಆದುದರಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಗ್ರಾಮಗಳ ವ್ಯಾಪ್ತಿಯ ಸಾರ್ವಜನಿಕರು ಈ ಅದಾಲತ್‌ನಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಕಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News