ಮೋದಿ ಸರಕಾರದ ವೈಫಲ್ಯ ವಿರೋಧಿಸಿ ಸಿಪಿಎಂ ಪ್ರತಿಭಟನೆ

Update: 2020-06-17 16:19 GMT

ಉಡುಪಿ, ಜೂ.17: ಕೊರೋನ ಲಾಕ್‌ಡೌನ್ ವಿಚಾರದಲ್ಲಿ ವಿಫಲತೆ ಕಂಡಿರುವ ಮೋದಿ ಸರಕಾರದ ವಿರುದ್ಧ ಸಿಪಿಐಎಂ, ಉಡುಪಿ ಜಿಲ್ಲೆಯ ವಿವಿಧೆಡೆಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

ಉಡುಪಿ ತಾಲೂಕು ಸಮಿತಿಯ ವತಿಯಿಂದ ಉಡುಪಿ ನಗರದಲ್ಲಿ ಪ್ರತಿಭಟನೆ ನಡೆಸಿ ಕರಪತ್ರ ಹಂಚಲಾಯಿತು. ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಡುಪಿ ತಾಲೂಕು ಕಾರ್ಯದರ್ಶಿ ಶಶಿಧರ್ ಗೊಲ್ಲ, ತಾಲೂಕು ಸಮಿತಿಯ ಸದಸ್ಯರಾದ ಕವಿರಾಜ್ ಎಸ್., ನಳಿನಿ, ವಿದ್ಯಾರಾಜ್ ಉಪಸ್ಥಿತರಿದ್ದರು.

ಕುಂದಾಪುರ: ಕೊರೋನ ತಡೆಗಟ್ಟುವಲ್ಲಿ ಕೇಂದ್ರದ ಮೋದಿ ಸರಕಾರದ ವೈಪಲ್ಯ ವಿರೋಧಿಸಿ ಕುಂದಾಪುರದಲ್ಲಿ ಸಿಪಿಐ(ಎಂ) ಕುಂದಾಪುರ ವಲಯ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಾರ್ಯದರ್ಶಿ ಎಚ್.ನರಸಿಂಹ, ರಾಜ್ಯ ಮುಖಂಡರಾದ ಕೆ.ಶಂಕರ್, ಮಹಾಬಲ ವಡೇರಹೋಬಳಿ ಮಾತನಾಡಿದರು. ಮುಖಂಡರಾದ ಬಲ್ಕೀಸ್, ರಾಜೇಶ್ ವಡೇರಹೋಬಳಿ, ವಿ.ನರಸಿಂಹ, ರವಿ ವಿ.ಎಂ., ರಿಜು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು: ಸಿಪಿಐ(ಎಂ) ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕೃಷಿಕೂಲಿ ಕಾರ್ಮಿಕರ ಬೃಹತ್ ಪ್ರತಿಭಟೆ ಹಾಗೂ ಸಾರ್ವಜನಿಕ ಸಭೆ ಜರಗಿತು.

ಸಿಪಿಐ(ಎಂ) ಪಕ್ಷದ ವಲಯ ಸಮಿತಿ ಕಾರ್ಯದರ್ಶಿ ಸುರೇಶ ಕಲ್ಲಾಗರ್ ಮಾತನಾಡಿದರು. ನಾಗರತ್ನ ನಾಡ, ಗಣೇಶ ತೊಂಡೆಮಕ್ಕಿ, ಸಂತೋಷ ಹೆಮ್ಮಾಡಿ, ಶೀಲಾವತಿ ಹಡವು, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಚಂದ್ರ ದೇವಾಡಿಗ ಉಪ್ಪುಂದ, ಶ್ರೀಧರ ಉಪ್ಪುಂದ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News