ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2020-06-25 16:32 GMT
ಉಡುಪಿ, ಜೂ.25: ವಿಪರೀತ ಕುಡಿತದ ಚಟ ಹೊಂದಿದ್ದ ಕುತ್ಪಾಡಿ ಗ್ರಾಮದ ಅಂಜನಗುಡ್ಡೆ ನಿವಾಸಿ ಗಣೇಶ್ ಪೂಜಾರಿ(35) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ಜೂ.24ರಂದು ಬೆಳಗ್ಗೆ ಮನೆಯ ಹಿಂಭಾಗದ ಪಾಳು ಬಿದ್ದ ಮನೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ವಿಪರೀತ ಶರಾಬು ಕುಡಿಯುವ ಚಟವನ್ನು ಹೊಂದಿದ್ದ ಬನ್ನಾಡಿ ಗ್ರಾಮದ ಕಂಬಳಕಟ್ಟು ನಿವಾಸಿ ಸುರೇಶ ಪೂಜಾರಿ (43) ಎಂಬವರು ಜೂ.24ರಂದು ರಾತ್ರಿ ವೇಳೆ ವೈಯಕ್ತಿಕ ಕಾರಣದಿಂದ ಮನನೊಂದು ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.