ಅಮ್ಮೆಂಬಳಕ್ಕೆ ಹೆಲ್ಪ್ ಲೈನ್‌ಗೆ ಪದಾಧಿಕಾರಿಗಳ ಆಯ್ಕೆ

Update: 2020-06-27 17:23 GMT
 ಉಬೈದ್

ಮಂಗಳೂರು, ಜೂ.27: ಅಮ್ಮೆಂಬಳ ಹೆಲ್ಪ್ ಲೈನ್ ಇದರ ವಾರ್ಷಿಕ ಮಹಾಸಭೆಯು ಉಬೈದ್ ಬಿ.ಎಚ್. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಿರಾಜುದ್ದೀನ್ ದುಆ ನೆರೆವೇರಿಸಿದರು. ತಂಜೀದ್ ಸ್ವಾಗತಿಸಿದರು. ಸಾಂತ್ವನ ಸೇವೆಯ ಹೆಲ್ಪ್ ಲೈನ್ ಸಂಚಾಲಕ ಸಿರಾಜುದ್ದೀನ್ ವರದಿ ವಾಚಿಸಿದರು. ಈ ಸಂದರ್ಭ ನಿಸಾರ್ ಕೋಟೆ ಹಾಗೂ ಫಾರೂಕ್ ಕೋಟೆ ಉಪಸ್ಥಿತರಿದ್ದರು.

ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಉಬೈದ್ ಬಿ.ಎಚ್., ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್.ಎ. ಸಿರಾಜುದ್ದೀನ್, ಜೊತೆ ಕಾರ್ಯದರ್ಶಿಯಾಗಿ ಫರ್ವೀಝ್, ಕೋಶಾಧಿಕಾರಿಯಾಗಿ ಲತೀಫ್ ಟಿ., ಮಾಧ್ಯಮ ಸಂಚಾಲಕರಾಗಿ ತಂಜೀದ್, ಸ್ವಯಂಸೇವಕರಾಗಿ ಅಶ್ರಫ್ ಬಿ., ಮನ್ಸೂರ್, ಸಮಾಜ ಸೇವಕರಾಗಿ ನಿಝಾಂ, ನೆಬೀಲ್, ಮುಖ್ಯ ಸದಸ್ಯರಾಗಿ ಶಬೀರ್ ಕೋಟೆ, ರಿಯಾಝ್ ಟಿ. ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News