ಅನಧಿಕೃತ ಗೋವು, ಒಂಟೆಗಳ ಹತ್ಯೆ ತಡೆಗಟ್ಟಲು ಸಮಿತಿ ರಚನೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ

Update: 2020-07-17 17:26 GMT
ಜಿ.ಎನ್.ಶಿವಮೂರ್ತಿ

ಬೆಂಗಳೂರು, ಜು.17: ರಾಜ್ಯದಲ್ಲಿ ಹಬ್ಬದ ದಿನಗಳನ್ನೊಳಗೊಂಡಂತೆ ಅನಧಿಕೃತ ಗೋವು, ಒಂಟೆಗಳ ಹತ್ಯೆ ಮತ್ತು ಸಾಮೂಹಿಕ ಹತ್ಯೆಯನ್ನು ತಡೆಗಟ್ಟಲು ಸರಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯೊಂದನ್ನು ರಚಿಸಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದ್ದಾರೆ.

ಈ ಸಮಿತಿಯು ಅನಧಿಕೃತ ಪ್ರಾಣಿ ಹತ್ಯೆ, ಸಾಗಾಣಿಕೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿರುವುದರಿಂದ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ರಾಣಿಗಳ ವಧೆಯನ್ನು ತಡೆಯುವ ನಿಟ್ಟಿನಲ್ಲಿ ಕಂದಾಯ, ಪೊಲೀಸ್, ಆರ್‍ಟಿಒ, ಪಶುಪಾಲನಾ ಇಲಾಖೆ, ಎನ್‍ಜಿಒ ಮತ್ತು ಬಿಬಿಎಂಪಿ ಅಧಿಕಾರಿಗಳ ನ್ನೊಳಗೊಂಡ ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News