ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಹಾಲೆ ಕಷಾಯ ವಿತರಣೆ

Update: 2020-07-21 05:42 GMT

ಮಂಗಳೂರು, ಜು.21: ನರಿಂಗಾನದ ಕೊಲ್ಲೂರಕೋಡಿಯಲ್ಲಿರುವ ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ದ್ರವ್ಯಗುಣ ವಿಭಾಗ ಮತ್ತು ರಸಶಾಸ್ತ್ರ ವಿಭಾಗದ ವತಿಯಿಂದ ಉಚಿತ ಆಟಿ ಅಮಾವಾಸ್ಯೆ ಪ್ರಯುಕ್ತ ಹಾಲೆ ಕಷಾಯ ವಿತರಣೆ ಕಾರ್ಯಕ್ರಮ ಸೋಮವಾರ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಲಕ್ಷ್ಮೀಶ ಉಪಾಧ್ಯಯ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ ಎಚ್. ಅವರು ಹಳೇಕೋಟೆ ಸೈಯದ್ ಮದನಿ ಕಾಲೇಜಿನ ಪ್ರಾಂಶುಪಾಲ ಕೆ.ಎಂ.ಕೆ.ಮಂಜನಾಡಿಯವರಿಗೆ ಕಷಾಯ ನೀಡುವ ಮೂಲಕ ಉದ್ಘಾಟಿಸಿದರು.

ಸಮಾರಂಭದಲ್ಲಿ ಕಾಲೇಜಿನ  ಉಪಪ್ರಾಂಶುಪಾಲರಾದ ಡಾ.ಶ್ರೀದರ್ ಗೋಖಲೆ, ಡಾ.ಶ್ರೀದೇವಿ, ಡಾ.ಆಶಾ ಮತ್ತು ಶಿಬಿರದ ಮುಖ್ಯಸ್ಥ ಅಬ್ದುಲ್ ರಝಾಕ್, ಆಸ್ಪತ್ರೆಯ ಅಧೀಕ್ಷಕ ಮುಶ್ತಾಕ್ ಮುಹಮ್ಮದ್, ಆಸ್ಪತ್ರೆಯ ಆಶಾ ದಿನೇಶ್, ಆಸ್ಪತ್ರೆ ಯ ಎಲ್ಲ ವಿಭಾಗಗಳ ವೈದ್ಯಕೀಯ ಮುಖ್ಯಸ್ಥರು, ವೈದ್ಯರು ಹಾಗೂ ಹೋಮೀಯೋಪತಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ವ್ಯೆದ್ಯರು, ಆಸ್ಪತ್ರೆಯ ಎಲ್ಲ ಸಿಬ್ಬಂದಿ ಭಾಗವಹಿಸಿದ್ದರು.

ಸಾರ್ವಜನಿಕರೂ ಇದರ ಸದುಪಯೋಗವನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News