ಜು.22ರಿಂದ ಉಡುಪಿ ಜಿಲ್ಲೆಯ ಗಡಿಗಳಲ್ಲಿ ಸೀಲ್‌ಡೌನ್ ರದ್ದು, ಬಸ್ ಸಂಚಾರ ಆರಂಭ: ಡಿಸಿ ಜಿ. ಜಗದೀಶ್

Update: 2020-07-21 15:42 GMT

ಉಡುಪಿ, ಜು.21: ಲಾಕ್‌ಡೌನ್ ಸಂಬಂಧ ಮುಖ್ಯಮಂತ್ರಿಗಳ ಸೂಚನೆಯ ಹಿನ್ನೆಲೆಯಲ್ಲಿ ಜು.22ರಿಂದ ಉಡುಪಿ ಜಿಲ್ಲೆಯ ಗಡಿಗಳಲ್ಲಿನ ಸೀಲ್‌ಡೌನ್ ರದ್ದು  ಪಡಿಸಲಾಗುವುದು ಮತ್ತು ಬಸ್ ಸಂಚಾರವನ್ನು ಆರಂಭಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರ ಅನಾವಶ್ಯಕ ಓಡಾಟವನ್ನು ತಡೆಯುವ ಉದ್ದೇಶದಿಂದ ಜಿಲ್ಲೆಯ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳು ಮುಂದುವರೆಸಲಾಗುವುದು. ಆದುದರಿಂದ ತುರ್ತು ಅಗತ್ಯ ಇರುವವರು ಮಾತ್ರ ಜಿಲ್ಲೆಗೆ ಬರಬಹುದು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳು ನಾಳೆಯಿಂದ ಜಿಲ್ಲೆಯಾದ್ಯಂತ ಸಂಚಾರ ಆರಂಭಿಸಲಿದ್ದು, ಖಾಸಗಿ ಬಸ್ ಮಾಲಕರ ಸಭೆಯನ್ನು ನಾಳೆ ಕರೆಯಲಾಗುತ್ತದೆ. ಒಂದು ವೇಳೆ ಖಾಸಗಿಯವರು ಬಸ್ ಓಡಿಸಲು ನಿರಾಕರಿಸಿದರೆ ಆ ಎಲ್ಲ ಮಾರ್ಗಗಳಲ್ಲಿ ಸರಕಾರಿ ಬಸ್‌ಗಳನ್ನು ಓಡಿಸಲಾಗುವುದು. ಎಲ್ಲ ಬಸ್ ಗಳಲ್ಲೂ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News