ಜು.23ರಂದು ಜಲಮಂಡಳಿ ಅದಾಲತ್

Update: 2020-07-22 18:41 GMT

ಬೆಂಗಳೂರು, ಜು.21: ಬೆಂಗಳೂರು ಜಲಮಂಡಳಿ ವತಿಯಿಂದ ವಿವಿಧ ಉಪವಿಭಾಗಗಳಲ್ಲಿ ಜು.23(ಗುರುವಾರ) ಬೆಳಗ್ಗೆ 9.30ರಿಂದ 11ರವರೆಗೆ ನೀರು ಸರಬರಾಜು ಹಾಗೂ ಒಳಚರಂಡಿ ಸಂಪರ್ಕ ಕುರಿತ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅದಾಲತ್ ಆಯೋಜಿಸಲಾಗಿದೆ.

ದಕ್ಷಿಣ ವಿಲೇಜ್ -2 ಉಪವಿಭಾಗ ಕೂಡ್ಲು, ಆಗ್ನೇಯ -5 4ನೇ ಟಿ ಬ್ಲಾಕ್, ಜಯನಗರ. ಪಶ್ಚಿಮ ವಿಲೇಜ್-1 4ನೇ ಬ್ಲಾಕ್, ಬಿ.ಎಸ್.ಕೆ 6ನೇ ಹಂತ, ಲಿಂಗಧೀರನಹಳ್ಳಿ, ನೈರುತ್ಯ-4 ಬನಗಿರಿನಗರ, ಬನಶಂಕರಿ 3ನೇ ಹಂತ. ಪೂರ್ವ ವಿಲೇಜ್-1 ಬಂಜಾರ ಲೇಔಟ್, ಹೊರಮಾವು, ಉತ್ತರ-1 8ನೇ ಮುಖ್ಯ ರಸ್ತೆ, ಸಹಕಾರನಗರ ಉಪವಿಭಾಗಗಳ ವ್ಯಾಪ್ತಿಯಲ್ಲಿ ಬರುವ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ನೀಡಿ ಪರಿಹಾರ ಪಡೆದುಕೊಳ್ಳಬಹುದು.

ಸಾಮಾನ್ಯ ಸಂದರ್ಭದಲ್ಲಿ ಕುಂದುಕೊರತೆ ಸಂಬಂಧಿಸಿದಂತೆ ಮಂಡಲಿಯ ದೂರವಾಣಿ ಸಂಖ್ಯೆ: 080-2223 8888, ಸಹಾಯವಾಣಿ 1916 ಹಾಗೂ ವಾಟ್ಸ್‍ಆ್ಯಪ್ ಸಂಖ್ಯೆ: 87622 28888 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News