ಕೊರೋನ ಸೋಂಕಿತರು ಆಸ್ಪತ್ರೆಗಳಿಂದ ಪರಾರಿ: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

Update: 2020-07-27 16:26 GMT

ಬೆಂಗಳೂರು, ಜು.27: ಬೆಂಗಳೂರಿನ ಆಸ್ಪತ್ರೆಗಳಿಂದ ಪರಾರಿಯಾಗಿರುವ ಕೊರೋನ ಸೋಂಕಿತರು ಹಾಗೂ ಮಾಧ್ಯಮಗಳು ಹೇಳುವಂತೆ ನಗರದಲ್ಲಿ 3 ಸಾವಿರ ಸೋಂಕಿತರು ನಾಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ. 

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬೆಂಗಳೂರಿನಲ್ಲಿ ಕೊರೋನ ಸೋಂಕು ಎಲ್ಲೆಡೆ ಹರಡುತ್ತಿದೆ. ರಾಜಧಾನಿಯಲ್ಲೇ ಅತಿ ಹೆಚ್ಚು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರ ಜೊತೆಗೆ ಅನೇಕ ಸೋಂಕಿತರು ಆಸ್ಪತ್ರೆಗಳಿಂದ ಪರಾರಿಯಾಗುತ್ತಿದ್ದಾರೆ. ಮಾಧ್ಯಮಗಳೂ ಹೇಳುವಂತೆ ನಗರದಲ್ಲಿ 3 ಸಾವಿರ ಸೋಂಕಿತರು ನಾಪತ್ತೆಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಪೀಠವು ಬಿಬಿಎಂಪಿಗೆ ಸೂಚಿಸಿದೆ.

ಕೊರೋನ ದೃಢಪಟ್ಟವರು ಚಿಕಿತ್ಸೆ ತೆಗೆದುಕೊಳ್ಳದೆ, ಹೋಂ ಕ್ವಾರಂಟೈನ್ ಆಗದೆ ನಗರದಲ್ಲಿ ತೀರುಗಾಡುತ್ತಿರುವ ಬಗ್ಗೆಯೂ ಮಾಹಿತಿ ನೀಡಲು ನ್ಯಾಯಪೀಠವು ತಿಳಿಸಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News