ಅನಾಥಾಲಯಕ್ಕೆ ಹಣ್ಣು ಹಂಪಲು ವಿತರಣೆ
ಉಡುಪಿ, ಆ.16: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಹಾಗೂ ತಾಜುಲ್ ಉಲಮಾ ರಿಲೀಫ್ ಸೆಲ್ ಇದರ ವತಿಯಿಂದ ಸ್ವಾತಂತ್ರ್ಯ ಸಂದೇಶ ಕಾರ್ಯ ಕ್ರಮ ಅಂಬಾಗಿಲುವಿನಲ್ಲಿರುವ ಡಿವಿಷನ್ ಕಚೇರಿಯಲ್ಲಿ ನಡೆಯಿತು.
ಈ ಪ್ರಯುಕ್ತ ಬ್ರಹ್ಮಾವರದ ಅನಾಥಾಲಯಕ್ಕೆ ಹಣು ಹಂಪಲು ವಿತರಣೆ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಉಡುಪಿ ಡಿವಿಷನ್ ಹಾಗೂ ಚಿಸ್ತಿಯ್ಯಿ ಚಾರಿಟೆಬಲ್ ಕಮಿಟಿ ಅಧ್ಯಕ್ಷ ಸೈಯ್ಯದ್ ಯೂಸುಫ್ ತಂಙಲ್ ಅಧ್ಯಕ್ಷತೆ ವಹಿಸಿದ್ದರು. ರಿಲಿಫ್ ಸೆಲ್ ಅಧ್ಯಕ್ಷ ರಝಾಕ್ ಉಸ್ತಾದ್ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಸೆಲ್ನ ಕೋಶಾಧಿಕಾರಿ ಸುಲೈಮಾನ್ ರಂಗನಕೆರೆ, ಡಿವಿಷನ್ ಉಪಾಧ್ಯಕ್ಷ ಮಜೀದ್ ಕಟಪಾಡಿ, ಕೋಶಾಧಿಕಾರಿ ನಝೀರ್ ಸಾಸ್ತಾನ, ಸೆಲ್ನ ಕಾರ್ಯದರ್ಶಿ ನವಾಝ್ ಉಡುಪಿ, ಆಸೀಫ್ ಸರಕಾರಿ ಗುಡ್ಡೆ, ಶಂಶುದ್ದೀನ್ ರಂಗನಕೆರೆ, ಸೈಯ್ಯದ್ ಅಸ್ರಾರ್ ತಂಙಲ್ ಹೂಡೆ, ಶಿಹಾಬ್ ರಂಗನಕೆರೆ ಉಪಸ್ಥಿತರಿದ್ದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ಸ್ವಾಗತಿಸಿದರು. ಸೆಲ್ನ ಕನ್ವೀನರ್ ನಾಸೀರ್ ಭದ್ರಗಿರಿ ವಂದಿಸಿದರು.