ಅಹ್ಮದ್ ಹಾಜಿ‌ ತುಂಬೆ ನಿಧನ: ಯುನಿವೆಫ್ ಕರ್ನಾಟಕ ಸಂತಾಪ

Update: 2020-08-16 17:19 GMT

ಮಂಗಳೂರು : ಮುಸ್ಲಿಮ್ ಸಮುದಾಯದ ಪ್ರಮುಖ ಉದ್ಯಮಿಯೂ, ಶಿಕ್ಷಣ ರಂಗದ ಸುಧಾರಕರೂ, ಉದ್ಯೋಗದಾತರೂ ಮತ್ತು ಸಮುದಾಯದ ನಾಯಕರೂ ಆಗಿದ್ದ ತುಂಬೆಯ ಸುಲ್ತಾನ್ ಎಂದು ಬಿರುದಾಂಕಿತ ಅಹ್ಮದ್ ಹಾಜಿ‌ ತುಂಬೆ ಅವರ ನಿಧನಕ್ಕೆ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತೀವ್ರ ಸಂತಾಪ ಪ್ರಕಟಿಸಿದ್ದಾರೆ.

ಸಮಾಜದ ಸರ್ವ ರಂಗಗಳಲ್ಲೂ ನಾಯಕತ್ವ ವಹಿಸಿದ ಬಹಳ ಅಪರೂಪದ ವ್ಯಕ್ತಿತ್ವವಾಗಿದ್ದರು ಅವರು. ಗ್ರಾಮೀಣ ಭಾಗದಲ್ಲಿ ಶಿಕ್ಷಣದಿಂದ, ಅದರಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣದಿಂದ, ವಂಚಿತರಾಗಿದ್ದ ಜನರಿಗೆ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ ಸರ್ವರಿಗೂ ಮಾದರಿಯಾಗಿದ್ದರು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News