ಪುತ್ತೂರು: ತಂದೆಯನ್ನು ಕೊಲೈಗೈದ ಆರೋಪಿ ಮಗನಿಗೆ ನ್ಯಾಯಾಂಗ ಬಂಧನ
Update: 2020-08-20 13:14 GMT
ಪುತ್ತೂರು: ತಂದೆ ಮತ್ತು ಮಗನ ನಡುವೆ ಜಗಳವಾಗಿ ತಂದೆಯನ್ನು ಹೊಡೆದು ಕೊಂದ ಮಗನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಬಾಳಾಯ ಎಂಬಲ್ಲಿ ಗಂಗಾಧರ ನಾಯ್ಕ ಮತ್ತು ಅವರ ಪುತ್ರ ಶಶಿಧರ ನಾಯ್ಕ ಎಂಬಾತನೇ ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿ.
ಶಶಿಧರ ತನ್ನ ಪತ್ನಿಗೆ ಹೊಡೆಯುತ್ತಿರುವುದನ್ನು ಪ್ರಶ್ನಿಸಿದ ತಂದೆಯ ಮೇಲೆ ಶಶಿಧರ್ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಹೊಡೆದಾಟವಾಗಿತ್ತು. ಶಶಿಧರ್ ತಂದೆಯ ತಲೆಗೆ ಗಂಭೀರ ಗಾಯಗೊಳಿಸಿದ್ದ ಕಾರಣ ಅವರು ಮೃತಪಟ್ಟಿದ್ದರು. ಶಶಿಧರ್ ಗೂ ಸಣ್ಣ ಪುಟ್ಟ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.