ಗಾಂಜಾ ಮಾರಾಟ: ಇಬ್ಬರ ಬಂಧನ

Update: 2020-08-23 14:23 GMT

ಕುಂದಾಪುರ, ಆ.23: ವಕ್ವಾಡಿ ಗ್ರಾಮದ ಮೂಡುಗೋಪಾಡಿ ಅಶೋಕ ನಗರ ಎಂಬಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.

ಕುಂಭಾಶಿ ವಿನಾಯಕ ನಗರ ನಿವಾಸಿ ಗಣೇಶ್(20) ಹಾಗೂ ಉಪ್ಪಿನಕುದ್ರು ದುಗ್ಗಾನ್‌ಬೆಟ್ಟು ನಿವಾಸಿ ಗೌತಮ್ ಯಾನೆ ಬುದ್ದ(25) ಬಂಧಿತ ಆರೋಪಿ ಗಳು. ಇವರು ಹೊಸನಗರ ಕಡೆಯಿಂದ ಖರೀದಿಸಿ ತಂದ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರೆನ್ನಲಾಗಿದೆ.

ಬಂಧಿತರಿಂದ 33ಸಾವಿರ ರೂ. ಮೌಲ್ಯದ 1ಕೆ.ಜಿ. 105 ಗ್ರಾಂ ತೂಕದ ಗಾಂಜಾ, 1800ರೂ. ನಗದು, ಎರಡು ಮೊಬೈಲ್, ಒಂದು ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News