​ಉಡುಪಿ ಚರ್ಚಿನ ಧರ್ಮಗುರುಗಳಿಗೆ ಕೊರೋನ ಪಾಸಿಟಿವ್

Update: 2020-08-23 16:34 GMT

ಉಡುಪಿ, ಆ.23: ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರುಗಳಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆ.31ರವರೆಗೆ ಚರ್ಚಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ಕೊರೋನ ಸೋಂಕಿಗೆ ಒಳಗಾಗಿರುವ ಧರ್ಮಗುರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನ ಭೀತಿಯ ಕಾರಣಕ್ಕೆ ಚರ್ಚಿನಲ್ಲಿ ಸಾರ್ವಜನಿಕರ ಪ್ರವೇಶವನ್ನು ತಡೆಹಿಡಿಯಲಾಗಿದೆ. ಅದೇ ರೀತಿ ಚರ್ಚ್ ಆವರಣದಲ್ಲಿರುವ ಬಿಷಪ್ ಹೌಸ್‌ನ್ನು ಕೂಡ ಬಂದ್ ಮಾಡ ಲಾಗಿದೆ.

ಈ ಸಂಬಂಧ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜಿಲ್ಲೆಯ ಎಲ್ಲ ಚರ್ಚ್ ಗಳಿಗೆ ಸುತ್ತೋಲೆ ಹೊರಡಿಸಿ, ಆ.31ರವರೆಗೆ ತನ್ನನ್ನು ಯಾರು ಕೂಡ ಭೇಟಿ ಯಾಗದಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News