ಕೆಜೆ ಹಳ್ಳಿ, ಡಿಜೆ ಹಳ್ಳಿಗೆ ಜಮಾಅತೇ ಅಹಲೆ ಸುನ್ನತ್ ನಿಯೋಗ ಭೇಟಿ

Update: 2020-08-24 14:02 GMT

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಪ್ರವಾದಿ ಅವರ ವಿರುದ್ಧ ಅಪಮಾನಕಾರಿ ಹೇಳಿಕೆಗಳನ್ನು ಪ್ರಕಟಿಸಿದ ನವೀನ ಎಂಬಾತನ ಕುಕೃತ್ಯವನ್ನು ಕರ್ನಾಟಕ ರಾಜ್ಯ ಜಮಾಅತೇ ಅಹಲೆ ಸುನ್ನತ್ ಸಂಘಟನೆ ಖಂಡಿಸಿದೆ.

ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಇತ್ತೀಚಿಗೆ ಗಲಭೆಯಾದ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ಜಮಾಅತೇ ಅಹಲೆ ಸುನ್ನತ್ ನಿಯೋಗದ ರಾಜ್ಯಾಧ್ಯಕ್ಷ  ಹಝ್ರತ್ ಮೌಲಾನಾ ಸಯ್ಯದ್ ತನ್ವೀರ್ ಹಾಶ್ಮಿ ಅವರ ನೇತೃತ್ವದಲ್ಲಿ ರವಿವಾರ ಭೇಟಿ ನೀಡಿತು.

ಗಲಭೆಯ ವೇಳೆ ಮೃತರಾದವರ ಕುಟುಂಬಗಳನ್ನು ಸಂದರ್ಶಿಸಿದ ನಿಯೋಗವು ಸಂತಾಪ ಸೂಚಿಸಿ, ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿತು. ಮೃತ ವ್ಯಕ್ತಿಗಳ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ನಿಯೋಗ ಭರಿಸುವ ಆಶ್ವಾಸನೆ ನೀಡಿತು.

ಗಲಭೆಗೆ ಸಂಬಂಧಿಸಿ ಬಂಧಿಸಲಾಗಿರುವ ಅಮಾಯಕರನ್ನು ಶೀಘ್ರವೇ ಬಿಡುಗಡೆಗೊಳಿಸಬೇಕೆಂದು ನಿಯೋಗವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News