ಉಡುಪಿ: ಶ್ರೀಕೃಷ್ಣ ಲೀಲೋತ್ಸವಕ್ಕೆ ಪೂರ್ವಸಿದ್ಧತೆ ಪ್ರಾರಂಭ
Update: 2020-08-24 12:46 GMT
ಉಡುಪಿ, ಆ.24: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಅಧಮಾರು ಮಠದ ಆಶ್ರಯದಲ್ಲಿಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ ಶ್ರೀಕೃಷ್ಣ ಲೀಲೋತ್ಸವ ಪೂರ್ವತಯಾರಿಯ ಅಂಗವಾಗಿ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಮುಹೂರ್ತ ನೇರವೇರಿತು.
ಪರ್ಯಾಯಶ್ರೀಗಳಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ನಡೆಸುತ್ತಿರುವ ಶ್ರೀ ಕೃಷ್ಣಪೂಜಾ ಪರ್ಯಾಯದ ಕೃಷ್ಣಜನ್ಮಾಷ್ಟಮಿಯ ಶ್ರೀಕೃಷ್ಣ ಲೀಲೋತ್ಸವ ಇದೇ ಸೆಫ್ಟಂಬರ್ 11ರಂದು ನಡೆಯಲಿದೆ.
ಇಂದು ಅಂಗವಾಗಿ ರಥಬೀದಿಯ ಸುತ್ತಲೂ ಮೊಸರು ಕುಡಿಕೆ ಮಹೋತ್ಸವ ಕ್ಕಾಗಿ ಗುರ್ಜಿ ನೆಡುವ ಮುಹೂರ್ತವನ್ನು ಇಂದು ನೆರವೇರಿಸ ಲಾಯಿತು. ಶ್ರೀಮಠದ ದಿವಾನರಾದ ಶ್ರೀಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಪಾರುಪತ್ಯ ಗಾರರದ ಮುದರಂಗಡಿ ಲಕ್ಷ್ಮೀಶ ಭಟ್, ಕೊಠಾರಿಗಳಾದ ರಮಣ ಆಚಾರ್ಯ, ವ್ಯವಸ್ಥಾಪಕ ಗೋವಿಂದರಾಜ್, ಪದ್ಮನಾಭ ಮೇಸ್ತ್ರಿ, ಪ್ರದೀಪ್ ಕುಮಾರ್ ಹಾಗೂ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.