ಮುಸ್ತಫಾ ಕುಂಞಿ ನಿಧನ; ಎಪಿಎಂಸಿ ಮಾರುಕಟ್ಟೆ ಬಂದ್, ಸಂತಾಪ ಸಭೆ

Update: 2020-08-27 13:53 GMT

ಮಂಗಳೂರು, ಆ.27: ಬುಧವಾರ ನಿಧನರಾದ ಮಂಗಳೂರು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಕುಂಞಿ (ಎಂಎಂಕೆ) ಅವರ ಗೌರವಾರ್ಥ ಮಂಗಳೂರು ಬೈಕಂಪಾಡಿಯ ಎಪಿಎಂಸಿ ತರಕಾರಿ, ಹಣ್ಣು ಹಂಪಲು ಮಾರುಕಟ್ಟೆಯಲ್ಲಿ ವರ್ತಕರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದರು.

ನಂತರ ಮಾರುಕಟ್ಟೆಯ ಕೇಂದ್ರ ಭಾಗದಲ್ಲಿ ಸೇರಿದ ವರ್ತಕರು ಮಂಗಳೂರು ಎಪಿಎಂಸಿ ವರ್ತಕರ ಸಂಘದ ನೇತೃತ್ವದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿದರು.

ಸಂಘದ ಅಧ್ಯಕ್ಷ ಭರತ್ ರಾಜ್, ಉಪಾಧ್ಯಕ್ಷ ಇಸಾಕ್ ಹಾಜಿ, ಹಿರಿಯ ವರ್ತಕ ಎಂಎಂ ಅಬೂಬಕರ್, ಕಾರ್ಪೊರೇಟರ್ ವರುಣ್ ಚೌಟ ಮಾತನಾಡಿದರು. ಸಂಘದ ಮುಖಂಡರಾದ ಯು.ಬಿ ಅಬ್ದುಲ್ಲ ಕುಂಞಿ, ಬಾಲರಾಜ್, ಚಂದ್ರಮೌಳಿ, ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ  ಬಿಕೆ ಇಮ್ತಿಯಾಝ್, ಸ್ವಾಗತಿಸಿದರು. ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಜನಾರ್ದನ ಬಿ.ಆರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News