ನೇಣು ಬಿಗಿದು ಆತ್ಮಹತ್ಯೆ

Update: 2020-08-27 16:44 GMT

 ಕೋಟ, ಆ.27: ಕುಡಿತದ ಅಭ್ಯಾಸವಿದ್ದು, ಸರಿಯಾದ ಕೆಲಸವಿಲ್ಲದೇ ಮದ್ಯಪಾನಕ್ಕೆ ಹಣ ಸಿಗದೆ ಜೀವನದಲ್ಲಿ ಜಿಗುಪ್ಸೆಗೊಂಡ ವೃದ್ಧರೊಬ್ಬರು ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಗಿಳಿಯಾರು ಗ್ರಾಮದ ಹೊಸಬೆಟ್ಟುನಿಂದ ವರದಿಯಾಗಿದೆ.

ಮೃತರನ್ನು ಮಂಜುನಾಥ ಪೂಜಾರಿ (65) ಎಂದು ಗುರುತಿಸಲಾಗಿದೆ. ಇವರು ನಿನ್ನೆ ರಾತ್ರಿ 11ರ ಸುಮಾರಿಗೆ ಊಟ ಮಾಡಿ ಮಲಗಿದ್ದವರು, ಬೆಳಗ್ಗೆ ನೋಡುವಾಗ ಕೋಣೆಯಲ್ಲಿ ಕುತ್ತಿಗೆಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News