ಪಂಜಿಮೊಗರು: ಸಿಪಿಎಂ ಧರಣಿ

Update: 2020-08-28 16:24 GMT

ಮಂಗಳೂರು, ಆ. 28: ಕೋವಿಡ್ ಸಂಕಷ್ಟ ಸಮಯದಲ್ಲಿ ಸರಕಾರಗಳು ಜನರಿಗೆ ಸಹಾಯ ಮಾಡುವ ಬದಲು ಖಾಸಗಿಯವರಿಗೆ ಇನ್ನಷ್ಟು ಸುಲಿಗೆಗೆ ಅವಕಾಶ ಕೊಟ್ಟು ಜನವಿರೋಧಿಯಾಗಿದೆ ಎಂದು ಸಿಪಿಎಂ ಜಿಲ್ಲಾ ಮುಖಂಡ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಸಿಪಿಎಂ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಸಪ್ತಾಹದ ಭಾಗವಾಗಿ ಶುಕ್ರವಾರ ಪಂಜಿಮೊಗರುವಿನಲ್ಲಿ ನಡೆದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಿಪಿಎಂ ಸ್ಥಳೀಯ ಮುಖಂಡರಾದ ನೌಶಾದ್, ಬಶೀರ್, ಅನಿಲ್ ಡಿಸೋಜ, ಚರಣ್, ಜಯ, ನವೀನ್, ಮುಸ್ತಫಾ, ಸೌಮ್ಯಾ,ಸರಿತಾ, ಪ್ರಮೀಳಾ,ಆಶಾ ಧರಣಿಯ ನೇತೃತ್ವ ವಹಿಸಿದ್ದರು. ಇಬ್ರಾಹಿಂ ಖಲೀಲ್ ಸ್ವಾಗತಿಸಿದರು. ಸಂತೋಷ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News