ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿಯ ಮೃತದೇಹ ಪತ್ತೆ

Update: 2020-08-31 15:22 GMT

ಬ್ರಹ್ಮಾವರ, ಆ.31: ಉಪ್ಪೂರು ಗ್ರಾಮದ ಕೆ.ಜಿ.ರೋಡ್ ಸೇತುವೆಯಿಂದ ಕೆಳಗೆ ನದಿಗೆ ಹಾರಿ ನಾಪತ್ತೆಯಾಗಿದ್ದ ಉಪ್ಪೂರು ಗ್ರಾಮದ ನರ್ನಾಡು ನಿವಾಸಿ ರವೀಂದ್ರ(48) ಎಂಬವರ ಮೃತದೇಹ ಆ.31ರಂದು ಬೆಳಗ್ಗೆ ಪತ್ತೆಯಾಗಿದೆ.

ಇವರು ಸಾಲ್ಮರದಲ್ಲಿರುವ ತಾಯಿ ಮನೆಗೆ ಹಾಗೂ ಸಂತೆಕಟ್ಟೆಯ ವೈದ್ಯರ ಬಳಿ ಹೋಗಿ ಬರುವುದಾಗಿ ಹೇಳಿ ಆ.29ರಂದು ಬೆಳಗ್ಗೆ ಮನೆಯಿಂದ ಹೋದ ವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಇವರ ಮೊಬೈಲ್ ಹಾಗೂ ಇತರ ಸ್ತುಗಳು ಸೇತುವೆ ಬಳಿ ಸಿಕ್ಕಿತ್ತು.

 ನಂತರ ಪೊಲೀಸ್ ಇಲಾಖೆಯವರು ಅಗ್ನಿ ಶಾಮಕದಳದವರ ಜೊತೆ ಸ್ವರ್ಣ ನದಿಯಲ್ಲಿ ಹುಡುಕಾಟ ನಡೆಸಿದ್ದು, ಇವರ ಮೃತ ದೇಹ ಬೈಕಾಡಿ ಗ್ರಾಮದ ಭದ್ರಗಿರಿ ಸ್ವರ್ಣನದಿ ಹೊಳೆ ಕಳವಿನ ಬಾಗಿಲನ ಬಳಿ ನೀರಿನಲ್ಲಿ ಪತ್ತೆಯಾಗಿದೆ. ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಇವರು, ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News