ಬೈಂದೂರು ಸಿಪಿಎಂ ಮನೆ ಮನೆ ಪ್ರಚಾರ ಕಾರ್ಯಕ್ರಮ

Update: 2020-08-31 15:35 GMT

ಬೈಂದೂರು, ಆ.31: ಕರೋನದಿಂದ ಸಂಕಷ್ಟಕ್ಕೊಳಗಾದ ಜನರ ನೆರವಿಗೆ ಕೇಂದ್ರ ಸರಕಾರ ಧಾವಿಸಲು ಹಾಗೂ ಉದ್ಯೋಗ ಕಳೆದುಕೊಂಡ ಜನ ಸಾಮಾನ್ಯರಿಗೆ ಉದ್ಯೋಗ ಸೇರಿದಂತೆ ಒಟ್ಟು 16 ಬೇಡಿಕೆಗಳ ವಾರಾಚರಣೆ ಅಂಗವಾಗಿ ಸಿಪಿಎಂ ಪಕ್ಷದ ವತಿಯಿಂದ ಇಂದು ಬೈಂದೂರಿನಲ್ಲಿ ಮನೆ ಮನೆ ಪ್ರಚಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೈಂದೂರು ಸಿಪಿಎಂ ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ, ಶಾಖಾ ಸದಸ್ಯರಾದ ಶಾಂತಿ, ನಾಗರತ್ನ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News