ಉಳ್ಳಾಲ: ನಿವೃತ ಶಿಕ್ಷಕರಿಗೆ ಸನ್ಮಾನ

Update: 2020-09-03 16:10 GMT

ಉಳ್ಳಾಲ, ಸೆ. 3: ಉಳ್ಳಾಲದಲ್ಲಿ ಕ್ಲಸ್ಟರಿನಲ್ಲಿ ನಿವೃತ್ತರಾದ ಮೊಗವೀರ ಶಾಲೆಯ ಮುಖ್ಯಶಿಕ್ಷಕ ವೇದಾವತಿ, ಸಹ ಶಿಕ್ಷಕಿ ರಾಜೀವಿ, ಶೋಭಾ ಸುವರ್ಣ, ಸರಕಾರಿ ಮಾ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಸುವಿಲತ, ಪುಷ್ಪಾವತಿ, ಹಝ್ರತ್ ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಫಿಲೋಮಿನಾ ಡಿಮೆಲ್ಲೋ ಹಾಗೂ ವರ್ಗಾವಣೆಗೊಂಡ ಸಿಅರ್‌ಪಿ ಲೈಲಾ ಕಿಶೊರಿ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿಸೈಯದ್ ಮದನಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಾಗೂ ಉಳ್ಳಾಲ ಸಿಆರ್‌ಪಿಯಾಗಿ ನೇಮಕವಾದ ಮೋಹನ್ ಅವರನ್ನು ಉಳ್ಳಾಲ ನಗರಸಭೆಯ ಆಯುಕ್ತ ರಾಯಪ್ಪ ಸನ್ಮಾನಿಸಲಾಯಿತು.

ಈ ಸಂದರ್ಭ ಮಂಗಳೂರು ದಕ್ಷಿಣ ವಲಯದ ಸಮನ್ವಯಾಧಿಕಾರಿ ಡಾ.ಪ್ರಶಾಂತ್, ಶಿಕ್ಷಣ ಸಂಯೋಜಕ ವಿಶ್ವನಾಥ ಜ್ಯೋತಿ,ತಲಪಾಡಿ ಕ್ಲಸ್ಟರಿನ ಸಿಆರ್‌ಪಿ ಹರೀಶ್ ಕುಮಾರ್ ಪಿ., ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಎಂ.ಎಚ್. ಮಲಾರ್ ಉಪಸ್ಥಿತರಿದ್ದರು.

ಸಿಆರ್‌ಪಿ ಮೋಹನ್ ಸ್ವಾಗತಿಸಿದರು. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News