ಗುಜ್ಜರಕೆರೆಯನ್ನು ಮಾದರಿ ಕೆರೆಯಾಗಿ ಅಭಿವೃದ್ಧಿ: ಶಾಸಕ ಕಾಮತ್

Update: 2020-09-06 12:20 GMT

ಮಂಗಳೂರು, ಸೆ.6: ನಗರದ ಮಂಗಳಾದೇವಿ ಹಾಗೂ ಬೋಳಾರ ಹಳೆಕೋಟೆ ಮಾರಿಯಮ್ಮ ದೇವಸ್ಥಾನಕ್ಕೆ ಸಂಬಂಧಪಟ್ಟ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ರವಿವಾರ ಸ್ಥಳಕ್ಕೆ ಆಗಮಿಸಿದ ಸಂದರ್ಭ ಮಾತನಾಡಿದ ಅವರು ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿ ಅನೇಕ ಪುರಾತನ ಕೆರೆಗಳು ನಾಮಾವಶೇಷವಾಗಿದೆ. ಈ ಕೆರೆಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ನೀಡುವ ಜವಬ್ದಾರಿ ನಮ್ಮದಾಗಿದೆ ಎಂದರು.

ಈಗಾಗಲೇ ಕೆರೆಯ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಸುಮಾರು 15 ಅಡಿಗಳಷ್ಟು ಆಳ ಹೂಳು ತುಂಬಿಕೊಂಡಿದ್ದು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ನೀರು ಕಲುಷಿತಗೊಳ್ಳದಂತೆ, ತಡೆಗೋಡೆಗಳ ದುರಸ್ತಿ ಹಾಗೂ ಕೆರೆಯ ನೀರು ಉಪಯೋಗಕ್ಕೆ ಯೋಗ್ಯವಾಗುವಂತೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈ ಸಂದರ್ಭ ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಕಾರ್ಪೇರೇಟರ್ ರೇವತಿ ಶ್ಯಾಮ್ ಸುಂದರ್, ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಪಾಲಿಕೆಯ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಭಾನುಮತಿ, ಶೈಲೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ದೀಪಕ್ ಪೈ, ಭಾರತಿ ರಾವ್, ಯಶವಂತ್, ರಾಜೇಂದ್ರ, ದಿನೇಶ್, ಶಿವಪ್ರಸಾದ್, ಪ್ರಮೋದ್, ಪುಷ್ಪರಾಜ್ ಶೆಟ್ಟಿ, ಸುನಿಲ್ ಸಾಲ್ಯಾನ್, ದಿನೇಶ್, ಸುಜಾತ ಆಳ್ವ, ಹೇಮ ಅರಕೆರೆ, ಅನಿಲ್ ಕೊಟ್ಟಾರಿ, ಅಮಿತ್ ಶೆಟ್ಟಿ, ಗುಜ್ಜರಕೆರೆ ತೀರ್ಥ ಸಮಿತಿಯ ಪ್ರಮುಖರಾದ ನೇಮು ಕೊಟ್ಟಾರಿ, ತಾರನಾಥ ಶೆಟ್ಟಿ, ಯೋಗಿಶ್ ಕುಮಾರ್, ಸಿಪಿ ದಿನೇಶ್, ಉದಯ್ ಶಂಕರ್, ಉಮಾ ಶಂಕರ್, ನಾರಾಯಣ ಶೆಟ್ಟಿ, ಮಾಧವ ವೆಂಕಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News