ಒಂಟಿ ಮಹಿಳೆಯ ರಕ್ಷಣೆ: ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ಆಶ್ರಯ
Update: 2020-09-06 15:56 GMT
ಉಡುಪಿ ಸೆ.6: ಪತಿಯನ್ನು ಹುಡುಕಿಕೊಂಡು ಉಡುಪಿಗೆ ಬಂದು ಅಸಹಾ ಯಕರಾಗಿ ರಾತ್ರಿ ಕಳೆದ ಮಹಿಳೆಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ನೀಡಿದ ಮಾಹಿತಿಯಂತೆ ಪೊಲೀಸರು ರವಿವಾರ ರಕ್ಷಿಸಿದ್ದಾರೆ.
ಶನಿವಾರ ಇಡೀ ರಾತ್ರಿ ನಿಲ್ದಾಣದಲ್ಲಿಯೇ ಕಳೆದು ರವಿವಾರ ಪತಿ ಸಿಗದೆ ಅಸಹಾಯಕರಾಗಿದ್ದು, ಈ ಬಗ್ಗೆ ರವಿವಾರ ರಾತ್ರಿ ವೇಳೆ ಮಾಹಿತಿ ತಿಳಿದ ವಿಶು ಶೆಟ್ಟಿ, ಮಹಿಳಾ ಪೊಲೀಸರ ಮೂಲಕ ಮಹಿಳೆಯನ್ನು ವಶಕ್ಕೆ ಪಡೆದು ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಸಖಿ ಒನ್ ಸ್ಟಾಪ್ನ ಸಿಬ್ಬಂದಿಗಳು ಮಹಿಳೆಗೆ ಧೈರ್ಯ ತುಂಬುವ ಮೂಲಕ ಆಶ್ರಯ ಕಲ್ಪಿಸಿ ಮಹಿಳೆಗೆ ರಾತ್ರಿಯ ಹೊತ್ತು ಸಾರ್ವಜನಿಕ ಸ್ಥಳದಲ್ಲಿ ಆಗುವ ಅನಾಹುತವನ್ನು ತಪ್ಪಿಸಿದಂತಾಗಿದೆ. ಮಹಿಳೆಯನ್ನು ಸಂಬಂಧಿಕರ ವಶಕ್ಕೆ ಒಪ್ಪಿಸುವ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.