ಹಳೆಯಂಗಡಿ: ಎಸ್‌ಡಿಪಿಐಯಿಂದ ಆಯುಷ್ಮಾನ್ ನೋಂದಣಿ ಅಭಿಯಾನ

Update: 2020-09-07 04:49 GMT

ಹಳೆಯಂಗಡಿ, ಸೆ.7: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹಳೆಯಂಗಡಿ ವಲಯದ ವತಿಯಿಂದ ’ಉಚಿತ ಆಯುಷ್ಮನ್ ಕಾರ್ಡ್ ನೋಂದಣಿ ಅಭಿಯಾನ’ವು ಸೆ.6ರಂದು ಹಳೆಯಂಗಡಿ ಇಂದಿರಾ ನಗರದಲ್ಲಿರುವ ಎಸ್‌ಡಿಪಿಐ ಕಛೇರಿಯಲ್ಲಿ ಜರಗಿತು

ಎಸ್‌ಡಿಪಿಐ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಹಾಗೂ ಕಾರ್ಯದರ್ಶಿ ನಿಸಾರ್ ಮರವೂರು ಜಂಟಿಯಾಗಿ ನೋಂದಾಯಿತ ಫಲಾನುಭವಿಗಳಿಗೆ ಉಚಿತ ಆಯುಷ್ಮಾನ್ ಕಾರ್ಡ್ ವಿತರಿಸುವ ಮುಖಾಂತರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಮಾಚಾರ್, ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಉಪಾಧ್ಯಕ್ಷ ಇಕ್ಬಾಲ್ ಎಂ.ಎ., ಎಸ್‌ಡಿಟಿಯು ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಕಾರ್ಯದರ್ಶಿ ಹಾರಿಸ್ ನವರಂಗ್, ಎಸ್‌ಡಿಪಿಐ ಹಳೆಯಂಗಡಿ ಕ್ಷೇತ್ರ ಅಧ್ಯಕ್ಷ ರಿಯಾಝ್, ಉಪಾಧ್ಯಕ್ಷ ಮಮ್ತಾಝ್ ಅಲಿ, ಸಿದ್ದೀಕ್ ಬೊಳ್ಳೂರು, ಅಕ್ಬರ್ ಬೊಳ್ಳೂರು ಉಪಸ್ಥಿತರಿದ್ದರು.

 ಹಿದಾಯತ್ ಬೊಳ್ಳೂರು, ಆಸಿಫ್ ಬೊಳ್ಳೂರು, ಅಝ್ವನ್, ಸಂಶೀರ್, ಕಬೀರ್, ಮುಬಾರಕ್, ಆಸಿಫ್ ಇಂದಿರಾ ನಗರ, ಸರ್ಫರಾಝ್, ಯಾಸೀನ್, ಕಬೀರ್, ರೀಯಾಝ್, ಬಾಸಿತ್, ನಿಸಾರ್, ಶಮೀಮ್ ಬೊಳ್ಳೂರು ಭಾಗವಹಿಸಿದ್ದರು.

ಸುಮಾರು 300ಕ್ಕಿಂತಲು ಅಧಿಕ ಮಂದಿಗೆ ಉಚಿತ ಆಯುಷ್ಮಾನ್ ಕಾರ್ಡ್ ಮುದ್ರಿಸಿ ವಿತರಿಸಲಾಯಿತು. ಇದರ ಉಸ್ತುವಾರಿಯನ್ನು ಹಳೆಯಂಗಡಿ ಡಿಜಿಟಲ್ ಸೇವಾ ಕೇಂದ್ರದ ಮಾಲಕ ಅಶೋಕ್ ಹಾಗೂ ಸಿಬ್ಬಂದಿ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News