ಉಡುಪಿ: ಅಗಲಿದ ನಾಯಕರ ಅನುಸ್ಮರಣೆ, ಪ್ರಾರ್ಥನಾ ಮಜ್ಲಿಸ್

Update: 2020-09-07 13:54 GMT

ಉಡುಪಿ, ಸೆ.7: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇತ್ತೀಚೆಗೆ ಅಗಲಿದ ಜಮಾಅತ್ ಜಿಲ್ಲಾಧ್ಯಕ್ಷರಾಗಿದ್ದ ಮೌಲಾನಾ ನಝೀರ್ ಅಝ್ಹರಿ ಹಝ್ರತ್, ಸದಸ್ಯರಾಗಿದ್ದ ಮನ್ಹರ್ ಇಬ್ರಾಹಿಂ, ರಾಜ್ಯ ಕಾರ್ಯದರ್ಶಿಯಾಗಿದ್ದ ಎಸ್.ಅಬ್ದುರ್ರಹ್ಮಾನ್ ಇಂಜಿನಿ ಯರ್ ಹಾಗೂ ಇನ್ನಿತರ ನಾಯಕರ ಮತ್ತು ಕಾರ್ಯಕರ್ತರ ಅನುಸ್ಮರಣೆ ಹಾಗೂ ಪ್ರಾರ್ಥನಾ ಮಜ್ಲಿಸ್ ಉಡುಪಿ ಅಜ್ಜರಕಾಡು ಸುನ್ನೀ ಸೆಂಟರ್‌ನಲ್ಲಿ ರವಿವಾರ ಜರಗಿತು.

ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ನೇತೃತ್ವ ವಹಿಸಿದ್ದರು. ರಾಜ್ಯ ಮುಸ್ಲಿಂ ಜಮಾಅತ್ ಜಿಲ್ಲಾ ಸಂಚಾಲಕ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅನುಸ್ಮರಣಾ ಭಾಷಣ ಮಾಡಿದರು.

ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ನೇಜಾರು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ಮಟಪಾಡಿ, ಕೆಎಂಜೆ ಜಿಲ್ಲಾ ಉಪಾಧ್ಯಕ್ಷ ಜಿ.ಸರ್ದಾರ್ ಗುಲ್ವಾಡಿ, ಬಿಎಸ್‌ಎಸ್ ರಫೀಕ್ ಕುಂದಾಪುರ, ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಹಾಜಿ ಮೊಯ್ದಿನ್ ಗುಡ್ವಿಲ್, ಪ್ರಧಾನ ಕಾರ್ಯದರ್ಶಿ ಹಂಝತ್ ಹೆಜಮಾಡಿ, ಎಸ್‌ಡಿಐ ಜಿಲ್ಲಾಧ್ಯಕ್ಷ ಸೆಯ್ಯದ್ ಫರೀದ್, ನಾಯಕರಾದ ಟಿ.ಎಂ. ರಹ್ಮತುಲ್ಲ ಹೂಡೆ, ಎಚ್.ಶಹಾಬಾನ್ ಹಂಗಳೂರು, ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಕೆಎಸ್‌ಎಂ ಮನ್ಸೂರ್ ದೊಡ್ಡಣಗುಡ್ಡೆ, ವೈ.ಎಂ.ಇಲ್ಯಾಸ್ ಕಟಪಾಡಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು. ಸುಬ್ಹಾನ್ ಅಹ್ಮದ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು. ಇಲ್ಯಾಸ್ ನಾವುಂದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News