ಕೇಶವಾನಂದ ಭಾರತಿಯವರಿಗೆ ಕಾನೂನು ಕಾಲೇಜಿನಲ್ಲಿ ಶ್ರದ್ಧಾಂಜಲಿ

Update: 2020-09-08 12:17 GMT

ಉಡುಪಿ, ಸೆ.8: ಇತ್ತೀಚೆಗೆ ದೈವಾಧೀನರಾದ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಅವರಿಗೆ ಕುಂಜಿಬೆಟ್ಟಿನಲ್ಲಿರುವ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ.ನಿರ್ಮಲಾ ಹರಿಕೃಷ್ಣ, ಕೇಶವಾನಂದ ಭಾರತಿ ಈ ದೇಶ ಕಂಡ ಶ್ರೇಷ್ಟ ಸಂತರಲ್ಲೊಬ್ಬರಾಗಿದ್ದು ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಕೂಡಾ ಹೋರಾಡಿ ಜಯಗಳಿಸಿದವರು ಹಾಗೂ ಆ ಮೂಲಕ ಸಂವಿಧಾನದ ಇತಿಹಾಸದಲ್ಲಿ ಒಂದು ಹೊಸ ಶಕೆಯನ್ನೇ ಪ್ರಾರಂಭಿಸಿದವರು ಎಂದರು.

ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News