ಮಂಗಳೂರು ಎಪಿಎಂಸಿಗೆ 5 ಕೋ.ರೂ.ಮಂಜೂರು
Update: 2020-09-08 12:31 GMT
ಮಂಗಳೂರು, ಸೆ.9: ಬೈಕಂಪಾಡಿಯಲ್ಲಿರುವ ಮಂಗಳೂರು ಎಪಿಎಂಸಿಯ ಅಭಿವೃದ್ಧಿಗೆ 5 ಕೋ.ರೂ. ಮಂಜೂರಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.
ಎಪಿಎಂಸಿಯ ಪ್ರಸ್ತಾವನೆಯನ್ನು ಮನ್ನಿಸಿ ಕೃಷಿ ಮಾರಾಟ ಇಲಾಖೆಯ ಸಕ್ಷಮ ಪ್ರಾಧಿಕಾರವು ಹಣವನ್ನು ಮಂಜೂರುಗೊಳಿಸಿದೆ. ಇದರಿಂದ ಗೋದಾಮು, ಶೌಚಾಲಯ, ಆವರಣ ಗೋಡೆ ದುರಸ್ತಿ ಕಾರ್ಯ ನಡೆಯಲಿದೆ. ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಿಂದ ಸ್ಥಳಾಂತರಗೊಂಡ ವ್ಯಾಪಾರಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.