ಪೇಜಾವರಶ್ರೀಗಳನ್ನು ಭೇಟಿಯಾದ ಶಾಂತಾರಾಮ ಸಿದ್ಧಿ

Update: 2020-09-10 14:15 GMT

ಉಡುಪಿ, ಸೆ.10: ರಾಜ್ಯ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡ ಸಿದ್ದಿ ಸಮುದಾಯದ ಮೊದಲ ಪ್ರತಿನಿಧಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಶಾಂತಾರಾಮ ಸಿದ್ದಿ ಅವರು ಗುರುವಾರ ನೀಲಾವರ ಗೋಶಾಲೆಯಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಆರೆಸ್ಸೆಸ್‌ನ ವನವಾಸಿ ಕಲ್ಯಾಣ ವಿಭಾಗದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಹೆಗಡೆ, ಮುಖಂಡರಾದ ಗೋಪಾಲ್ ಕೇಸರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News