ಕರ್ನಾಟಕ ಬ್ಯಾಂಕ್ ಬಿಸಿನೆಸ್ ಟಾನಿಕ್ ನವತಿ ಸಂಭ್ರಮ

Update: 2020-10-26 16:53 GMT

ಮಂಗಳೂರು, ಅ. 26: ಕರ್ನಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಸಿಎ ಎಸ್.ಎಸ್. ನಾಯಕ್ ಮಾರ್ಗದರ್ಶನದಲ್ಲಿ ‘ಬಿಸಿನೆಸ್ ಟಾನಿಕ್’ ಎಂಬ ನೇರ ಸಂವಾದ ಕಾರ್ಯಕ್ರಮದ 90ನೇ ಆವೃತ್ತಿ (ನವತಿ ಸಂಭ್ರಮ) ರವಿವಾರ ನಡೆಯಿತು.

ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್‌ನ ಮಹಾ ಪ್ರಬಂದಕ ವಿನಯ್ ಭಟ್ ಪಿ.ಜೆ. ಉದ್ಘಾಟಿಸಿದರು. ಐಸಿಎಐ ಅಧ್ಯಕ್ಷ ಸಿಎ ಎಸ್.ಎಸ್. ನಾಯಕ್ ಮಾತನಾಡಿ, ಈಗಿನ ಕಾಲಘಟ್ಟದಲ್ಲಿ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಹಾಗೂ ಗ್ರಾಹಕರಿಗೆ ಪ್ರಯೋಜನವಾಗುವ ‘ಬಿಸಿನೆಸ್ ಟಾನಿಕ್’ ಕಾರ್ಯಕ್ರಮದ 90 ಸಂಚಿಕೆಗಳ ವಿವರ ನೀಡಿದರು.

ಈ ಸಂದರ್ಭದಲ್ಲಿ ಸಿಎ ವಿದ್ಯಾರ್ಥಿಗಳಾದ ಅಂಜು ಮನೋಜ್, ಸಂಜನಾ ಎಂ. ಪೈ ಹಾಗೂ ಸಹನಾ ಯು. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದುಬೈನ ಇನ್ವೆಸ್ಟ್‌ಮೆಂಟ್ ಕನ್ಸಲ್ಟೆಂಟ್ ಡಾ.ಚಂದ್ರಕಾಂತ್ ಭಟ್, ಬ್ಯಾಂಕಿಂಗ್ ಕ್ಷೇತ್ರದ ತಜ್ಞ ವಸಂತ್ ಶೆಟ್ಟಿ, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ನ ಅಧ್ಯಕ್ಷ ಯು.ರಾಮ ರಾವ್, ಹೂಡಿಕೆ ತಜ್ಞ ಜಿ. ಮುರಳೀಧರ್ ಶೆಣೈ, ಲೀಲಾಕ್ಷ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

ಸಿಎ ಯಶಶ್ವಿನಿ ಕೆ. ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News