ಹಂಝ ಮಲಾರ್‌ರ ಕಥಾ ಸಂಕಲನ ಬಿಡುಗಡೆ

Update: 2020-11-02 11:19 GMT

ಮಂಗಳೂರು, ನ.2: ಪತ್ರಕರ್ತ ಹಂಝ ಮಲಾರ್‌ರ ‘ಅದರಾಚೆ ಊರೇ ಇಲ್ಲ’ ಕಥಾಸಂಕಲನವನ್ನು ‘ಮುಸಾಫಿರ್’ ಸಿನೆಮಾದ ಚಿತ್ರೀಕರಣದ ಮಧ್ಯೆಯೇ ಸಾಹಿತಿ ಮುಹಮ್ಮದ್ ಬಡ್ಡೂರು ಪಾವೂರು ಗ್ರಾಮದ ಇನೋಳಿ ನದಿ ತೀರದಲ್ಲಿ ರವಿವಾರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು 23 ವರ್ಷದ ಹಿಂದೆ ಹಂಝ ಮಲಾರ್‌ರ ಪ್ರಥಮ ಕಥಾಸಂಕಲನ ‘ಸೂಫಿಬ್ಯಾರಿಯ ಝಕಾತ್ ಯಾತ್ರೆ’ಯ ಅನಾವರಣಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದ್ದೆ. ಇಂದು ಅದೇ ಕತೆ ಆಧಾರಿತ ಚಲನಚಿತ್ರ ‘ಮುಸಾಫಿರ್’ ಚಿತ್ರೀಕರಣದ ಮಧ್ಯೆಯೇ ಈ ಕಥಾಸಂಕಲನ ಅನಾವರಣಗೊಳ್ಳುತ್ತಿರುವುದು ಸಂತಸದ ವಿಚಾರ. ಭವಿಷ್ಯದಲ್ಲಿ ಈ ಕಥಾಸಂಕಲನದ ಒಂದು ಕತೆಯಾದರೂ ಚಲನಚಿತ್ರವಾಗಿ ಮೂಡಿಬರಲಿ ಎಂದು ಆಶಿಸಿದರು.

ಸಿನೆಮಾ ನಿರ್ದೇಶಕ ಮಂಜುನಾಥ್ ಪಾಂಡವಪುರ, ಸಹ ನಿರ್ದೇಶಕರಾದ ಮುರಳೀಧರ್, ಪ್ರಶಾಂತ್ ಭಜಂತ್ರಿ, ದಿಲಾವರ್ ರಾಮದುರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News