ಭಟ್ಕಳ : ಬೈಕ್ ಢಿಕ್ಕಿ; ಗಂಭೀರ ಗಾಯಗೊಂಡ ಪಾದಚಾರಿ ಮೃತ್ಯು

Update: 2020-11-02 17:51 GMT

ಭಟ್ಕಳ:  ಬೈಕ್‍ವೊಂದು ನಿಯಂತ್ರಣ ತಪ್ಪಿ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಂಗ್ರೆ ಗ್ರಾಪಂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಬೆಂಗ್ರೆ ಗೊಂಚಿತ್ಲು ಗುಡಿಗದ್ದೆಮನೆ ನಿವಾಸಿ ಗಣಪತಿ ವೆಂಕ್ಟಯ್ಯ ದೇವಡಿಗ (72) ಎಂದು ಗುರುತಿಸಲಾಗಿದೆ. ಮೃತರು ಸ್ಥಳೀಯವಾಗಿ ನಡೆಯುವ ಹರಿಸೇವಾ ಕಾರ್ಯದ ಅಡುಗೆ ಕಾರ್ಯಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿ ಬೈಕ್ ಸವಾರನನ್ನು ಬದ್ರಿಯಾ ಕಾಲನಿ ನಿವಾಸಿ ಮುಷ್ತಾಕ್ ಎಂದು ತಿಳಿದುಬಂದಿದ್ದು, ಆತನ ವಿರುದ್ಧ ಮುರುಡೇಶ್ವರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News