ನ.8ಕ್ಕೆ ಬಾಳೆಕುದ್ರು ಮಠದಲ್ಲಿ ಮಾಹಿತಿ ಶಿಬಿರ

Update: 2020-11-04 13:13 GMT

ಉಡುಪಿ, ನ. 4: ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಶ್ರೀಮಠ ಬಾಳೆಕುದ್ರು ಆಶ್ರಯದಲ್ಲಿ ನ.8ರ ಬೆಳಗ್ಗೆ 9:30ರಿಂದ 12 0ರವರೆಗೆ ಭಾರತೀಯ ಸಂಸ್ಕಾರ - ಶಿಕ್ಷಣ ಆಧಾರಿತ ಜನ್ಮ ದಿನಾಚರಣೆ ಮಾಹಿತಿ ಶಿಬಿರ ನಡೆಯಲಿದೆ.

ನಮ್ಮ ಸನಾತನ ಸಂಸ್ಕೃತಿಯಲ್ಲಿ ಎಲ್ಲ ಹಬ್ಬ ಹರಿದಿನಗಳನ್ನು -ತಮಸೋ ಮಾ ಜ್ಯೋತಿರ್ಗಮಯ- ದೀಪಬೆಳಗಿಸುವುದರ ಮೂಲಕ ಆಚರಿಸು ತ್ತೇವೆ. ಆದರೆ ಇತ್ತೀಚೆಗೆ ನಮ್ಮ ಸಂಸ್ಕೃತಿಯನ್ನು ಮರೆತು ಬೆಳಕಿನಿಂದ ಕತ್ತಲೆಯೆಡೆಗೆ ಸಾಗುವ ನಕಾರಾತ್ಮಕ ಸಂದೇಶವನ್ನು ನೀಡುವ ಪಾಶ್ಚಾತ್ಯ ಕೃತಿಯನ್ನು ಆಚರಿಸಲಾಗುತ್ತಿದೆ. ಆದ್ದರಿಂದ ಲೋಕ ಶಿಕ್ಷಣ ಸಾಹಿತ್ಯ ವಿಸ್ತಾರಗೊಳ್ಳಬೇಕಾದ ಅವಶ್ಯಕತೆಯನ್ನು ಮನಗಂಡು ಭಾರತೀಯ ಸಂಸ್ಕೃತಿ, ಪರಂಪರೆ ಆಧಾರಿತವಾಗಿ ಜನ್ಮ ದಿನೋತ್ಸವ ಆಚರಿಸಿಕೊಳ್ಳುವುದರಿಂದ ಉಂಟಾಗುವ ಸತ್ಪರಿಣಾಮಗಳ ಕುರಿತು ಮಾಹಿತಿ ನೀಡಲು ಈ ಶಿಬಿರವನ್ನು ಆಯೋಜಿಸಲಾಗಿದೆ.

ಶ್ರೀಮಠದ ಶ್ರೀನೃಸಿಂಹಾಶ್ರಮ ಸ್ವಾಮೀಜಿ ಅವರು ಜನ್ಮ ದಿನಾಚರಣೆ ಮಹತ್ವದ ಕುರಿತು ಮಾಹಿತಿ ಹಾಗೂ ಆಚರಣೆಯ ವಿಧಾನವನ್ನು ತಿಳಿಸಿ ಕೊಡಲಿರುವರು. ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ನೊಂದಾವಣೆಗಾಗಿ ಶಿಬಿರ ಸಂಯೋಜಕರಾದ ಮಂಜುನಾಥ ಭಟ್ (ಮೊ:9148592107) ಇವರನ್ನು ಸಂಪರ್ಕಿಸುವಂತೆ ಶ್ರೀಮಠದ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News