ನ.7 : ಪಿಲಾರುನಲ್ಲಿ ವೈಜ್ಞಾನಿಕ ಅಡಿಕೆ ಬೇಸಾಯ ಮಾಹಿತಿ

Update: 2020-11-05 15:03 GMT

 ಉಡುಪಿ, ನ.5: ಜಿಲ್ಲಾ ಕೃಷಿಕ ಸಂಘ ಶಿರ್ವ ವಲಯ ಸಮಿತಿ ವತಿಯಿಂದ ವೈಜ್ಞಾನಿಕ ಅಡಿಕೆ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮ ನ.7ರ ಶನಿವಾರ ಸಂಜೆ 4:30ಕ್ಕೆ ಪಿಲಾರು ಶ್ರೀನರಸಿಂಹ ದೇವರ ಮಠ ಬಳಿ ಇರುವ ವಾದಿರಾಜ ಉಡುಪರ ಮನೆ ವಠಾರದಲ್ಲಿ ನಡೆಯಲಿದೆ.

ಬೆಳ್ಮಣ್ಣು ಶರತ್ ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ವನ್ನು ಪಿಲಾರು ಕೃಷ್ಣಮೂರ್ತಿ ಉಡುಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ರಿತೇಶ್ ಶೆಟ್ಟಿ ಸೂಡ, ಅರುಣ ಡಿಸೋಜಾ ಪಿಲಾರು ಮತ್ತು ಪ್ರಕಾಶ್ ಶೆಟ್ಟಿ ಪಿಲಾರು ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮತ್ತು ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ.

 ಕಡಿಮೆ ವೆಚ್ಚದಲ್ಲಿ ಲಾಭದಾಯಕವಾಗಿ ಅಡಿಕೆ ಕೃಷಿ ಮಾಡುವ ವಿಧಾನಗಳು, ನಾಟಿ, ಕೀಟ-ರೋಗಗಳ ನಿರ್ವಹಣೆ ಕುರಿತ ಸಮಗ್ರ ಮಾಹಿತಿ ನೀಡುವ ಈ ಕಾರ್ಯಕ್ರಮದಲ್ಲಿ ಕೃಷಿಕರು, ಕೃಷಿ ಆಸಕ್ತರು ಭಾಗವಹಿಸುವಂತೆ ಜಿಲ್ಲಾ ಕೃಷಿಕ ಸಂಘ ವಿನಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News