ಕೋವಿಡ್ 19 ನಿಗ್ರಹಕ್ಕೆ ಯಶಸ್ಸಿ ಜನಜಾಗೃತಿ

Update: 2020-11-05 17:11 GMT

ಮಂಗಳೂರು, ನ.5: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತ ಸರಕಾರ ಇದರ ವತಿಯಿಂದ ಕೋವಿಡ್-19ಗೆ ಸಂಬಂಧಿಸಿದ ನಡವಳಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮೊಬೈಲ್ ವ್ಯಾನ್ ಮೂಲಕ ಅ.27ರಿಂದ ಆರಂಭಗೊಂಡ ಜನಜಾಗೃತಿಯು ನ.5ರವರೆಗೆ ಯಶಸ್ವಿಯಾಗಿ ನಡೆಯಿತು.

ಕೈಗಳನ್ನು ಆಗಾಗ ಶುಚಿಗೊಳಿಸುವುದು, ಮಾಸ್ಕ್ ಸರಿಯಾಗಿ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಡ್ಡಾಯವಾಗಿ ಕಾಪಾಡಿಕೊಳ್ಳುವುದು ಇತ್ಯಾದಿಗೆ ಸಂಬಂಧಿಸಿ ಭಿತ್ತಿಪತ್ರಗಳು ಮತ್ತು ಧ್ವನಿವರ್ಧಕ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಕೇಂದ್ರ ಸರಕಾರದ ವಾರ್ತಾಸಚಿವಾಲಯದ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ನೋಂದಾಯಿತ ಕಾರವಾರದ ಬಂಟದೇವ ಯುವಕ ಸಂಘವು ಬೀದಿ ನಾಟಕ ಮತ್ತು ಹಾಡಿನ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News