ಮಂಗಳೂರು: 'ಏಸ್ ಐಎಎಸ್ ಅಕಾಡಮಿ' ನೂತನ ಕಚೇರಿ ಉದ್ಘಾಟನೆ

Update: 2020-11-06 16:30 GMT

ಮಂಗಳೂರು : ನಾಗರಿಕ ಸೇವಾ ಪರೀಕ್ಷೆಗೆ ತರಬೇತಿ ನೀಡುವ ''ಏಸ್ ಐಎಎಸ್ ಅಕಾಡಮಿ' ನಗರದ ಎಂ.ಜಿ. ರಸ್ತೆಯಲ್ಲಿನ ಎಂಪಾಯರ್ ಮಾಲ್ ಎದುರುಗಡೆ ಇರುವ ಗೋಲ್ಡನ್ ಆರ್ಕೇಡ್ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ನೂತನ ತರಬೇತಿ ಕೇಂದ್ರವನ್ನು ಡಾ. ಯಾಕೂಬ್ ಕೈಕಂಬ ಅವರು ಉದ್ಘಾಟಿಸಿದರು.

ಈ ಸಂದರ್ಭ ಮುಹಮ್ಮದ್ ಕುಂಞಿ, ಅಬ್ದುಲ್ ರವೂಫ್ ಪುತ್ತಿಗೆ, ಡಾ. ಖೈಸರ್ ಖಾನ್ ಮತ್ತು ಖಾಸಿಮ್ ಅಹ್ಮದ್ ಅವರು ಸಂದರ್ಭೋಚಿತವಾಗಿ ಮಾತನಾಡಿ, ಸಂಸ್ಥೆಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದು ಸರಕಾರಿ ಉದ್ಯೋಗ ಪಡೆದಿರುವ ಹಳೆ ವಿದ್ಯಾರ್ಥಿಗಳನ್ನು ಹಾಗೂ ಈ ಬಾರಿಯ ಐಎಎಸ್ ಮತ್ತು ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ನಂತರ ನಾಗರಿಕ ಸೇವಾ ಪರೀಕ್ಷಾ ಆಕಾಂಕ್ಷಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ಶಿಬಿರವನ್ನು ನಡೆಸಲಾಯಿತು.

ಏಸ್ ಫೌಂಡೇಶನ್ ಇದರ ಪ್ರ. ಕಾರ್ಯದರ್ಶಿ ಇಂತಿಯಾಝ್ ಖತೀಬ್ ಸ್ವಾಗತಿಸಿ, ಫರ್ವೇಝ್ ಅಲಿ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News