ತೆರ್ನಮಕ್ಕಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣೆ ಕಳವು

Update: 2020-11-11 14:18 GMT

ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯ ಬಾಗಿಲು ಮುರಿದು ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ತಾಲೂಕಿನ ತೆರ್ನಮಕ್ಕಿ ಸಭಾತಿ ಕ್ರಾಸ್‍ನಲ್ಲಿ ನಡೆದಿದೆ.

ಮನೆಯು ವಾಸುದೇವ ಗಣಪಯ್ಯ ಕಾಮತ್ (78) ಎಂಬವರಿಗೆ ಸೇರಿದ್ದಾಗಿದೆ. ಕಳವಾದ ಸೊತ್ತಿನಲ್ಲಿ 13 ಸಾವಿರ ರೂ. ನಗದು ಹಾಗೂ ಹವಳದ ಲಾಕೆಟ್, ವಜ್ರದ ನೆಕ್ಲೆಸ್, ರೂಬಿ ಸ್ಟೋನ್‍ ಚಿನ್ನದ ಬಳೆ, ಬ್ರಾಸ್‍ಲೆಟ್, ಬಂಗಾರದ ಮುತ್ತಿನ ಹಾರ, ಉಂಗುರ, ಬೆಳ್ಳಿಯ ಸೊಂಟದ ಚೈನ್ ಸೇರಿದಂತೆ ಒಟ್ಟೂ 278 ಗ್ರಾಮ್‍ ತೂಕದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸೇರಿದ್ದು, ಒಟ್ಟು ಮೌಲ್ಯ 4,82,500 ರೂ. ಎಂದು ಅಂದಾಜಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರುಡೇಶ್ವರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News