ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಗ್ರಾಮ‌ ಸಮಿತಿ ರಚನೆ

Update: 2020-11-13 15:12 GMT

ಬೆಳ್ತಂಗಡಿ : ಕರ್ನಾಟಕ ಮುಸ್ಲಿಂ ಜಮಾಅತ್ ಕೆ.ಎಮ್.ಜೆ.ಸಿ ಇದರ ಉಜಿರೆ ಗ್ರಾಮ ಸಮಿತಿ ರಚನೆಯು  ಉಜಿರೆ ಜುಮಾ ಮಸ್ಜಿದ್ ನಲ್ಲಿ ನಡೆಯಿತು.

ಉಜಿರೆ ಬ್ಲಾಕ್ ಸಮಿತಿ ಅಧ್ಯಕ್ಷ ಪಿ‌ ಮುಹಮ್ಮದ್ ನೆರಿಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ ಕೋಯ ತಂಙಳ್ ಉಜಿರೆ ಮಾರ್ಗದರ್ಶನ ನೀಡಿದರು. ಉಜಿರೆ ಬ್ಲಾಕ್ ಸಮಿತಿ ಉಪಾಧ್ಯಕ್ಷ ಹಮೀದ್ ನೆಕ್ಕರೆ, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ, ಪ್ರ. ಕಾರ್ಯದರ್ಶಿ ಹಾರಿಸ್ ಉಜಿರೆ ಮೊದಲಾದ ನಾಯಕರು ಭಾಗಿಯಾಗಿದ್ದರು.

ಈ ವೇಳೆ ಉಜಿರೆ ಗ್ರಾಮ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ,ಅತ್ತಾಜೆ, ಉಪಾಧ್ಯಕ್ಷರುಗಳಾಗಿ ಉಸ್ಮಾನ್ ಮುಸ್ಲಿಯಾರ್‌,  ಅನ್ಸಾರ್ ಮಾಚಾರು ಮತ್ತು ಸಯ್ಯಿದ್ ಇಬ್ರಾಹಿಂ (ಝೈನು) ಪ್ರ.ಕಾರ್ಯದರ್ಶಿಯಾಗಿ ದಾವೂದ್ ಕಕ್ಕೆಜಾಲ್, ಕಾರ್ಯದರ್ಶಿಗಳಾಗಿ ಶಾಕಿರ್ ಉಜಿರೆ,‌ ಮುಬೀನ್ ಉಜಿರೆ ಮತ್ತು ಅಲ್ತಾಫ್ ಉಜಿರೆ,‌ ಕೋಶಾಧಿಕಾರಿಯಾಗಿ ಅಶ್ರಫ್ ಎಂ.ಎಚ್, ಸಂಘಟನಾ ಕಾರ್ಯದರ್ಶಿಯಾಗಿ ರವೂಫ್ ಅತ್ತಾಜೆ ಇವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News