ಮೀಲಾದುನ್ನಬಿ ಪ್ರಯುಕ್ತ ಆನ್‌ಲೈನ್ ಸೌಹಾರ್ದ ಕವಿಗೋಷ್ಠಿ

Update: 2020-11-17 12:19 GMT

ಮಂಗಳೂರು, ನ.17: ಪ್ರವಾದಿ ಮುಹಮ್ಮದ್ (ಸ) ಜನ್ಮದಿನಾಚರಣೆಯ ಪ್ರಯುಕ್ತ ಸಮನ್ವಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆನ್‌ಲೈನ್ ಸೌಹಾರ್ದ ಕವಿಗೋಷ್ಠಿ ಇತ್ತೀಚೆಗೆ ನಡೆಯಿತು. ಕವಿ, ಪ್ರಾಧ್ಯಾಪಕ ಎನ್.ವಿಶ್ವನಾಥ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಇಕ್ಬಾಲ್ ಬಾಳಿಲ ಉದ್ಘಾಟಿಸಿದರು.

ಕವಿಗಳಾದ ಕೆ.ಎಂ.ಅಶ್ರಫ್ ಸಖಾಫಿ ಕುರ್ನಾಡು, ಮಂಜುನಾಥ್ ಮಲೆನಾಡು, ಎನ್.ಎಂ.ಹನೀಫ್ ನಂದರಬೆಟ್ಟು, ಲಕುಮಿಕಂದ ಮುಕುಂದ ಬೆಳಗಾವಿ, ಎಂ.ಎಂ.ಮ್ಅ್ರೂಫ್ ಸುಲ್ತಾನಿ ಆತೂರು, ಭರಮಣ್ಣ ಗುರಿಕಾರ್ ಕೊಪ್ಪಳ, ಹಮೀದ್ ಹಸನ್ ಮಾಡೂರು, ಎಚ್.ಭೀಮರಾವ್ ವಾಷ್ಠರ್ ಕೋಡಿಹಾಳ, ಕುಸುಮಾಕರ ಅಂಬೆಕಲ್ಲು, ಸುಹೇಚ ಪರಮವಾಡಿ, ಪ್ರೀತಿ ಭರತ್, ಕ-ಶಿಖ ಬಜ್ಪೆ, ಬುಸ್ಸಣ್ಣ ವಿ.ಯಾದವ್ ಬದ್ದೇಪಲ್ಲಿ, ಸಮ್ಯುಕ್ತ್ ಜೈನ್ ಕಡಬ ಕವನ ವಾಚಿಸಿದರು.

ಸಾಮಾಜಿಕ ಮುಖಂಡ ಎ.ಬಿ.ಮೊಹಿದೀನ್ ಕಳಂಜ, ಪ್ರಶಾಂತ್ ಚೌಕದಪಾಲು, ಮುಹಮ್ಮದ್ ಹಾಜಿ ಪರಪ್ಪು, ಡಿ.ಐ.ಅಬೂಬಕರ್ ಕೈರಂಗಳ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಎಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಸಿರಾಜ್ ಮಣಿಲ, ಎ.ಸಲ್ಮಾನ್ ಹಾರಿಸ್ ಆಲಂತಡ್ಕ, ಪುಣಚ ಮನೋಹರ ನಾಯಕ್ ಅತಿಥಿಗಳಾಗಿದ್ದರು.

ಮಂಗಳ ಸಾಹಿತ್ಯ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಸ್ವಾಗತಿಸಿ ವಂದಿಸಿದರು. ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News