ಕೊರೋನ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರಿಗೆ ಸನ್ಮಾನ

Update: 2020-11-18 13:26 GMT

ಉಡುಪಿ, ನ.18: ಕೊರೋನ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ 16 ಮಂದಿ ಕೊರೋನಾ ವಾರಿಯರ್ಸ್‌ ಗೃಹರಕ್ಷಕರನ್ನು ರೋಟರಿ ಗವರ್ನರ್ ರಾಜಾರಾಮ್ ಟ್ ಬುಧವಾರ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಸನ್ಮಾನಿಸಿದರು.

ಉಡುಪಿ ಜಿಲ್ಲೆಯ 8 ಘಟಕಗಳಿಂದ ಒಟ್ಟು 16 ಮಂದಿ ಗೃಹರಕ್ಷಕರನ್ನು ಸನ್ಮಾನಿಸಿದ ರೋಟರಿ ಗವರ್ನರ್, ಗೃಹರಕ್ಷಕರನ್ನು ಅಭಿನಂದಿಸಿ ಮಾತನಾ ಡಿದರು. ಕಾರ್ಯಕ್ರಮದಲ್ಲಿ ಉಪರಾಜ್ಯಪಾಲ ದೇವದಾಸ್ ವಿ ಶೆಟ್ಟಿಗಾರ್, ಕಾರ್ಯದರ್ಶಿ ನವೀನ್‌ಚಂದ್ರ ಸಾಲ್ಯಾನ್, ಜಿಲ್ಲಾ ಸಮಾದೇಷ್ಟ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

ಅಂಬಲಪಾಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಗಣೇಶ್‌ಕುಮಾರ್ ಮಟ್ಟು ಸ್ವಾಗತಿಸಿದರು. ಉಪಸಮಾದೇಷ್ಟ ರಮೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News