ಉಕ್ಕುಡ: ಎಸ್ಸೆಸ್ಸೆಫ್, ಎಸ್.ವೈ.ಎಸ್ ವತಿಯಿಂದ ಮಹ್ಲರತುಲ್ ಬದ್ರಿಯ ಹಾಗೂ ಯುನಿಟ್ ಮಹಾಸಭೆ

Update: 2020-12-07 16:26 GMT

ವಿಟ್ಲ: ಎಸ್ಸೆಸ್ಸೆಫ್, ಎಸ್.ವೈ.ಎಸ್ ಇದರ ವತಿಯಿಂದ ಮಹ್ಲರತುಲ್ ಬದ್ರಿಯ ಮಜ್ಲಿಸ್ ಹಾಗೂ ಎಸ್ಸೆಸ್ಸೆಫ್ ಉಕ್ಕುಡ ಶಾಖೆಯ ಮಹಾಸಭೆ ಝಹ್ರತುಲ್ ಖುರ್ಆನ್ ಶಾಲೆಯಲ್ಲಿ ರವಿವಾರ ನಡೆಯಿತು.

ಸಭೆಯಲ್ಲಿ 2021ನೇ ವರ್ಷದ ಎಸ್ಸೆಸ್ಸೆಫ್ ಉಕ್ಕುಡ ಶಾಖೆಯ ನೂತನ ಸಮಿತಿಯನ್ನು ರಚಿಸಲಾಯಿತು. ಯುನಿಟ್ ಅಧ್ಯಕ್ಷರಾಗಿ ಯುವ ಉದ್ಯಮಿ ಡಿ.ಕೆ  ಮುಸ್ತಫಾ ರವರನ್ನು ನೇಮಿಸಲಾಯಿತು. ಕಾರ್ಯದರ್ಶಿಯಾಗಿ ಮುಹ್ಯಿಸುನ್ನ ಉಕ್ಕುಡ ದರ್ಸ್ ವಿದ್ಯಾರ್ಥಿ ಯಾಸಿರ್ ಮೈತ್ರಿ, ಕೋಶಾಧಿಕಾರಿಯಾಗಿ ನೌಫಲ್ ದರ್ಕಾಸ್ ಕಾಂತಡ್ಕ, ಉಪಾಧ್ಯಕ್ಷರಾಗಿ ಮುಸ್ತಫ ಮೈತ್ರಿ, ರಾಫಿ ತ್ವೈಬ, ಜೊತೆ ಕಾರ್ಯದರ್ಶಿಗಳಾಗಿ ಬಾಸಿಮ್ ಆಲಂಗಾರು, ಅನೀಶ್ ಆಲಂಗಾರು, ಆಸಿಫ್ ಒಪ್ಪ ರವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಟ್ಲದ ಸುನ್ನಿ ನಾಯಕರಾದ ಶರಫೀ ಉಸ್ತಾದ್ ಮೂಡಂಬೈಲ್, ಸಲೀಮ್ ಹಾಜಿ ಬೈರಿಕಟ್ಟೆ, ಶರೀಫ್ ತ್ವೈಬ, ಅಬೂಬಕ್ಕರ್ ಟೆಲಿಫೊನ್, ಬಶೀರ್ ಸಖಾಫಿ, ಹಾಗೂ ಊರಿನ ಇನ್ನಿತರ ಗಣ್ಯ ವ್ಯಕ್ತಿಗಳು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News